
ಪಂಜಾಬ್[ಮಾ. 04] ದುಬೈನಿಂದ ಹಿಂದಿರುಗಿದ್ದ ಕರೋನಾ ವೈರಸ್ ಶಂಕಿತನೊಬ್ಬ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವುದು ಆತಂಕಕ್ಕೆ ದಾರಿ ಮಾಡಿ ಕೊಟ್ಟಿತ್ತು.
ಮೊಗಾದ ನಿವಾಸಿಯಾಗಿದ್ದವ ದುಬೈನಿಂದ ಹಿಂದಿರುಗಿದ್ದ. ಕೊರೋನಾ ಶಂಕಿತ ಅನುಮಾನದ ಮೇಲೆ ಸ್ಥಳೀಯ ಆಸ್ಪತ್ರೆಗೆ ಪರೀಕ್ಷೆಗೆಂದು ಬಂದಿದ್ದ. ಈ ವೇಳೆ ಮಾಧ್ಯಮದವರು ಪೋಟೋ ಕ್ಲಿಕ್ಕಿಸಿದ ಕಾರಣ ಗಲಿಬಿಲಿಗೊಂಡವ ಕಾಲು ಕಿತ್ತಿದ್ದಾನೆ.
ಆದರೆ ಇದಾದ ಕೆಲವು ಗಂಟೆಗಳ ನಂತರ ಹಿಂದಕ್ಕೆ ಬಂದು ಕಫ ಸೇರಿದಂತೆ ಇತರ ಸ್ಯಾಂಪಲ್ ನೀಡಿದ್ದಾನೆ. ಈತನ ಹೆಚ್ಚಿನ ಆರೈಕೆಗೂ ಆಸ್ಪತ್ರೆ ಕ್ರಮ ತೆಗೆದುಕೊಂಡಿದೆ.
ಕೊರೋನಾಗೆ ಸಂಬಂಧಿಸಿದ ವಾರ್ಡ್ ಗೆ ಅಡ್ಮಿಟ್ ಆಗಲು ಆತ ಮೊದಲು ಒಪ್ಪಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ಆತನ ಮನೆಗೆ ತೆರಳಿ ಒಪ್ಪಿಸಿಕೊಂಡು ಕರೆದುಕೊಂಡು ಬರಬೇಕಾಯಿತು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ