ಮಾ.15ರಿಂದ ಸುಪ್ರೀಂಕೋರ್ಟಲ್ಲಿ ಭೌತಿಕ ಕಲಾಪ ಶುರು!

Published : Mar 07, 2021, 11:55 AM IST
ಮಾ.15ರಿಂದ ಸುಪ್ರೀಂಕೋರ್ಟಲ್ಲಿ ಭೌತಿಕ ಕಲಾಪ ಶುರು!

ಸಾರಾಂಶ

ಮಾ.15ರಿಂದ ಸುಪ್ರೀಂಕೋರ್ಟಲ್ಲಿ ಭೌತಿಕ ಕಲಾಪ ಶುರು| ಇನ್ಮುಂದೆ ಹೈಬ್ರಿಡ್‌ ಕಲಾಪ: ವಿಡಿಯೋ ಕಾನ್ಫರೆನ್ಸ್‌ + ಭೌತಿಕ ಕಲಾಪ| 1 ವರ್ಷದ ಬಳಿಕ ಖುದ್ದು ಹಾಜರಾತಿ ಮೂಲಕ ಕೋರ್ಟ್‌ ಕಾರ‍್ಯ

ನವದೆಹಲಿ(ಮಾ.07): ಕೊರೋನಾ ವೈರಸ್‌ನಿಂದಾಗಿ ಕಳೆದ ವರ್ಷದ ಮಾಚ್‌ರ್‍ನಿಂದ ಕೇವಲ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತ್ರ ವಿಚಾರಣೆಗಳು ನಡೆಯುತ್ತಿದ್ದ ಸುಪ್ರೀಂಕೋರ್ಟ್‌ನಲ್ಲಿ ಮಾ.15ರಿಂದ ಭೌತಿಕ ಕಲಾಪಗಳು ಮತ್ತೆ ಆರಂಭವಾಗಲಿವೆ. ಆದರೆ, ಅದು ಹೈಬ್ರಿಡ್‌ ಮಾದರಿಯಲ್ಲಿರಲಿದೆ. ಅಂದರೆ, ಕೆಲ ದಿನ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆ ಹಾಗೂ ಇನ್ನು ಕೆಲ ದಿನ ಭೌತಿಕ ಕಲಾಪಗಳು ನಡೆಯಲಿವೆ.

ಭೌತಿಕ ಕಲಾಪ ಪುನಾರಂಭಿಸಲು ಶನಿವಾರ ಸುಪ್ರೀಂಕೋರ್ಟ್‌ ನಿಯಮಾವಳಿ ಬಿಡುಗಡೆ ಮಾಡಿದೆ. ಅದರನ್ವಯ, ಮಾ.15ರಿಂದ ಪ್ರಾಯೋಗಿಕವಾಗಿ ಹೈಬ್ರಿಡ್‌ ಕಲಾಪ ಆರಂಭಿಸಲಾಗುತ್ತದೆ. ಯಾವ ವಿಚಾರಣೆ ಕೋರ್ಟ್‌ನಲ್ಲಿ ನಡೆಯಬೇಕು ಮತ್ತು ಯಾವ ವಿಚಾರಣೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಯಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ಪೀಠಗಳಿಗೆ ಬಿಡಲಾಗಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಅಂತಿಮ ವಿಚಾರಣೆಯ/ಸಾಮಾನ್ಯ ಕೇಸುಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ. ಪ್ರಕರಣದಲ್ಲಿರುವ ಕಕ್ಷೀದಾರರ ಸಂಖ್ಯೆ, ಕೋರ್ಟ್‌ ರೂಮ್‌ನ ಗಾತ್ರ ಮುಂತಾದವುಗಳನ್ನು ಗಮನಿಸಿ ಕಲಾಪ ಹೇಗೆ ನಡೆಯಬೇಕು ಎಂಬುದನ್ನು ಜಡ್ಜ್‌ ನಿರ್ಧರಿಸಬಹುದು. ಇನ್ನೆಲ್ಲಾ ರೀತಿಯ ಪ್ರಕರಣಗಳು ಹಾಗೂ ಸೋಮವಾರ ಮತ್ತು ಶುಕ್ರವಾರ ವಿಚಾರಣೆಗೆ ನಿಗದಿಯಾಗುವ ಪ್ರಕರಣಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಬೇಕು ಎಂದು ಸೂಚಿಸಲಾಗಿದೆ.

ಕಳೆದ ವರ್ಷದ ಮಾಚ್‌ರ್‍ನಲ್ಲಿ ಕೊರೋನಾ ಹರಡತೊಡಗಿದ ನಂತರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತ್ರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗಳು ನಡೆಯುತ್ತಿದ್ದವು. ಹೈಕೋರ್ಟ್‌ ಹಾಗೂ ಅಧೀನ ಕೋರ್ಟ್‌ಗಳಲ್ಲಿ ಕೆಲ ತಿಂಗಳ ಹಿಂದಿನಿಂದಲೇ ಭೌತಿಕ ಕಲಾಪಗಳು ಆರಂಭವಾಗಿವೆ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲೂ ಕೂಡಲೇ ಭೌತಿಕ ಕಲಾಪ ಆರಂಭಿಸಬೇಕೆಂದು ವಕೀಲರ ಸಂಘಗಳು ಒತ್ತಾಯಿಸಿದ್ದವು. ಅದರಂತೆ ಭೌತಿಕ ಕಲಾಪ ಆರಂಭಿಸಲಾಗುತ್ತಿದೆ.

ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳುವ ವಕೀಲರು ಹಾಗೂ ಕಕ್ಷೀದಾರರ ಸಂಖ್ಯೆ 20ಕ್ಕಿಂತ ಹೆಚ್ಚಿದ್ದರೆ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ನಲ್ಲೇ ನಡೆಸಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಭೌತಿಕವಾಗಿ ವಿಚಾರಣೆ ನಡೆಯಬೇಕು ಎಂದು ಜಡ್ಜ್‌ಗೆ ಅನ್ನಿಸಿದರೆ ಭೌತಿಕ ವಿಚಾರಣೆ ನಡೆಸಲು ಅವರಿಗೆ ಅಧಿಕಾರ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಪಡದವರಿಗೆ ಕೋರ್ಟ್‌ ರೂಮ್‌ಗೆ ಪ್ರವೇಶ ನೀಡಬಾರದು, ಪ್ರಕರಣದ ವಿಚಾರಣೆ ಶುರುವಾಗುವುದಕ್ಕಿಂತ 10 ನಿಮಿಷಕ್ಕಿಂತ ಮೊದಲು ಅದಕ್ಕೆ ಸಂಬಂಧಪಟ್ಟವರನ್ನು ಒಳಗೆ ಬಿಡಬಾರದು ಎಂದು ಸೂಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ