SP Balasubramaniam Road : ಕಾಮ್ದಾರ್ ನಗರ ರಸ್ತೆಗೆ ಎಸ್‌ಪಿಬಿ ಸ್ಮರಣಾರ್ಥ ಸಿಎಂ ಸ್ಟಾಲಿನ್ ಘೋಷಣೆ

Published : Sep 25, 2024, 07:48 PM ISTUpdated : Sep 25, 2024, 08:08 PM IST
SP Balasubramaniam Road : ಕಾಮ್ದಾರ್ ನಗರ ರಸ್ತೆಗೆ ಎಸ್‌ಪಿಬಿ ಸ್ಮರಣಾರ್ಥ ಸಿಎಂ ಸ್ಟಾಲಿನ್ ಘೋಷಣೆ

ಸಾರಾಂಶ

ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಅವರ ನಿವಾಸ ಇರುವ ಚೆನ್ನೈನ ನುಂಗಂಬಾಕ್ಕಂನ ಕಾಮ್ದಾರ್ ನಗರದ ಮೊದಲ ಬೀದಿಗೆ 'ಎಸ್.ಬಿ.ಬಾಲಸುಬ್ರಮಣ್ಯಂ ರಸ್ತೆ' ಎಂದು ನಾಮಕರಣ ಮಾಡಲಾಗುವುದು ಎಂದು ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.

SP Balasubramaniam Road: ಎಸ್‌ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ ಅವರ ನಿವಾಸ ಇರುವ ಚೆನ್ನೈನ ನುಂಗಂಬಾಕ್ಕಂನ ಕಾಮ್ದಾರ್ ನಗರದ ಮೊದಲ ಬೀದಿಗೆ 'ಎಸ್.ಬಿ.ಬಾಲಸುಬ್ರಮಣ್ಯಂ ರಸ್ತೆ' ಎಂದು ನಾಮಕರಣ ಮಾಡಲಾಗುವುದು ಎಂದು ತಮಿಳನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.

ಎಸ್‌ಬಿಬಿ ಅವರ ಸ್ಮರಣಾರ್ಥ ಅವರು ವಾಸಿಸುತ್ತಿದ್ದ ಕಾಮ್ದಾರ್ ನಗರ ಪ್ರದೇಶವನ್ನು ಎಸ್‌ಬಿಬಿ ನಗರ ಎಂದು ಮರುನಾಮಕರಣ ಮಾಡುವಂತೆ ಅವರ ಪುತ್ರ ಸರಣ್ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗೆ ವಿನಂತಿಸಿದ್ದರು. ಎಸ್‌ಪಿಬಿ ಪುಣ್ಯಸ್ಮರಣೆ ದಿನವಾದ ಇಂದು ಅವರ ಮನೆ ಇರುವ ಪ್ರದೇಶದ ರಸ್ತೆಗೆ ಅವರ ಹೆಸರನ್ನು ಇಡಲಾಗುವುದು ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ. 

ಗಾನಗಾರುಡಿಗ ಎಸ್‌ಪಿ ಬಾಲಸುಬ್ರಮಣ್ಯಂ ಅಭಿನಯಿಸಿದ ಚಿತ್ರಗಳು ಇಲ್ಲಿವೆ

ತಮ್ಮ 55 ವರ್ಷಗಳ ಸುದೀರ್ಘ ಸಂಗೀತ ವೃತ್ತಿ ಬದುಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರದ್ದಾಗಿದೆ. ಸುಮಾರು 16 ಭಾಷೆಗಳಲ್ಲಿ ಒಟ್ಟು 40,000 ಹಾಡುಗಳನ್ನು ಹಾಡುಗಳ ಮೂಲಕ ಯಾರೂ ಸರಿಗಟ್ಟದ ದಾಖಲೆ ಮಾಡಿದ್ದಾರೆ. ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ ಮತ್ತು ಪದ್ಮಭೂಷಣವನ್ನು ಪಡೆದಿದ್ದಾರೆ. 

ಎಸ್ ಪಿ ಬಾಲಸುಬ್ರಹ್ಮಣ್ಯಂ ಭಾಷೆ, ಗಡಿಯನ್ನು ಮೀರಿದ ಕಲಾವಿದರಾಗಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿ ಸೈ ಎನಿಸಿಕೊಂಡವರು. ಎದೆ ತುಂಬಿ ಹಾಡುವ ಮೂಲಕ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ನೆನಪಾಗುವುದು ಅವರ ಮಕ್ಕಳ ಸ್ವಭಾವ ಮತ್ತು ಹಾಸ್ಯಪ್ರಜ್ಞೆ ಹಾಡುಗಳ ಮೂಲಕ, ಹಾಸ್ಯದ ಮೂಲಕ ಅಥವಾ ಮನಸಿಗೆ ತಟ್ಟುವ  ಮಾತುಗಳು ಮರೆಯಲು ಸಾಧ್ಯವೇ?

ಎಸ್‌ಪಿಬಿ ಧ್ವನಿಯಲ್ಲಿ 'ಈ ಭೂಮಿ ಬಣ್ಣದ ಬುಗುರಿ..' ಹಾಡು ಹುಟ್ಟಿದ್ದು ಹೀಗೆ, ಎಂತಾ ಸ್ಟೋರಿ ನೋಡಿ!

ಕೊವಿಡ್ ಪಾಸಿಟಿವ್ ಆದ ಬಳಿಕ ಅವರ ಆರೋಗ್ಯವೂ ಕೈಕೊಟ್ಟು 2020 ರಲ್ಲಿ ಅವರು ಕಾಲವಾಗಿದ್ದು ಭಾರತೀಯ ಚಿತ್ರರಂಗಕ್ಕಾದ ದೊಡ್ಡ ನಷ್ಟ. ಎಸ್‌ಪಿಬಿ ಇಂದಿಗೆ ಕಾಲವಾಗಿ ನಾಲ್ಕು ವರ್ಷಗಳೇ ಕಳೆದರೂ ಅವರ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳು ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಎನ್ನಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?