ಕೊರೋನಾ ಬಂತೆಂದು ತಾಯಿಯನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟೋದ!

Published : Jul 05, 2020, 03:13 PM IST
ಕೊರೋನಾ ಬಂತೆಂದು ತಾಯಿಯನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟೋದ!

ಸಾರಾಂಶ

ಕೊರೋನಾ ಬಂತೆಂದು ತಾಯಿಯನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟೋದ!| ತಾಯಿಯಿಂದ ಮನೆಮಂದಿಗೆಲ್ಲಾ ಸೋಂಕು ಹರಡುತ್ತದೆಂದು ಕೃತ್ಯ

ವಿಜಯವಾಡ(ಜು.05): ಕೊರೋನಾ ಸೋಂಕಿತ ತಾಯಿಯಿಂದ ಮನೆಮಂದಿಗೆಲ್ಲಾ ಸೋಂಕು ಹರಡುತ್ತದೆಂದು 80 ವರ್ಷದ ವೃದ್ಧ ತಾಯಿಯನ್ನು ಸ್ವತಃ ಪುತ್ರನೇ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಚೇರ್ಲಾದಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಗೋವಾದ ಮಗಳ ಮನೆಯಿಂದ ಮಚೇರ್ಲಾಗೆ ವಾಪಸ್ಸಾಗಿದ್ದ ವಯೋವೃದ್ಧೆಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ಆಸ್ಪತ್ರೆಗೆ ಕೊಂಡೊಯ್ದಾಗ ಸೋಂಕು ದೃಢಪಟ್ಟಿತ್ತು. ತಾಯಿಯಿಂದ ಮನೆಮಂದಿಗೆಲ್ಲಾ ಕೊರೋನಾ ತಗುಲಬಹುದು ಎಂಬ ಭೀತಿಯಲ್ಲಿ ಪುತ್ರ ವೆಂಕಟೇಶ್ವರ ರಾವ್‌ ಎಂಬಾತ ತಾಯಿಯನ್ನು ಮಚೇರ್ಲಾ ಬಸ್‌ ನಿಲ್ದಾಣದ ಬೆಂಚಿನ ಮೇಲೆ ಕುಳ್ಳಿರಿಸಿ, ನೀರು ತರುವುದಾಗಿ ಹೇಳಿ ಕಾಲ್ಕಿತ್ತಿದ್ದಾನೆ.

ಪ್ರಯಾಣಿಕರು ವೃದ್ಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆಕೆಯನ್ನು ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?