40 ಕುರಿಗಳ ಭಕ್ಷಿಸಿದ್ದ ಹಿಮ ಚಿರತೆ ಕೊನೆಗೂ ಸೆರೆ!

Published : May 04, 2020, 04:03 PM ISTUpdated : May 04, 2020, 04:06 PM IST
40 ಕುರಿಗಳ ಭಕ್ಷಿಸಿದ್ದ ಹಿಮ ಚಿರತೆ ಕೊನೆಗೂ ಸೆರೆ!

ಸಾರಾಂಶ

ಬರೋಬ್ಬರಿ ನಲ್ವತ್ತು ಕುರಿಗಳನ್ನು ಭಕ್ಷಿಸಿದ್ದ ಹಿಮ ಚಿರತೆ| ಸ್ಥಳೀಯರ ಸಹಾಯದಿಂದ ಬಂಧಿಸಲು ಯಶಸ್ವಿಯಾದ ಅಧಿಕಾರಿಗಳು| ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಲಾಹುಲ್(ಮೇ.04): ಕಳೆದ ನಾಲ್ಕು ದಿನಗಳಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚು ಕುರಿಗಳನ್ನು ಭಕ್ಷಿಸಿದ್ದ ಹಿಮ ಚಿರತೆಯನ್ನು ಕೊನೆಗೂ ಅರಣ್ಯ  ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನಿಂದ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಹಿಮಾಚಲ ಪ್ರದೇಶದ ಲಾಹುಲ್ ಹಾಗೂ ಸ್ಪಿತಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಹಿಮ ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ನಾಡಿಗೆ ಆಗಮಿಸಿದ್ದ ಈ ಚಿರತೆ ಅಲ್ಲಿನ ಸ್ಥಳೀಯರು ಸಾಕಿದ್ದ ನಲ್ವತ್ತಕ್ಕೂ ಅಧಿಕ ಕುರಿಗಳನ್ನು ಭಕ್ಷಿಸಿತ್ತು. ಸ್ಥಳೀಯರು ನೀಡಿದ್ದ ದೂರಿನ ಮೇರೆಗೆ ಬಲೆ ಬೀಸಿದ್ದ ಅರಣ್ಯ ಅಧಿಕಾರಿಗಳು ಕಠಿಣ ಪರಿಶ್ರಮದ ಬಳಿಕ ಭಾನುವಾರ ಈ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೆ ಶುದ್ಧವಾದ ಬೆನ್ನಲ್ಲೇ ನದಿಯಲ್ಲಿ ಡಾಲ್ಫಿನ್‌ ಪ್ರತ್ಯಕ್ಷ!, ವಿಡಿಯೋ ವೈರಲ್

ಈ ಹಿಮ ಚಿರತೆ ಸ್ಪಿತಿ ಜಿಲ್ಲೆಯ ಗಿಯೂ ಹಳ್ಳಿಯಲ್ಲಿ ಸೆರೆ ಸಿಕ್ಕಿರುವುದಾಗಿ ಕಾಜಾ ವಿಭಾಗ ಅರಣ್ಯ ಅಧಿಕಾರಿ ಹರ್ದೇವ್ ನೇಗಿ ತಿಳಿಸಿದ್ದಾರೆ.

ಸದ್ಯ ಈ ಹಿಮ ಚಿರತೆಯನ್ನು ಶಿಮ್ಲಾದ ಕುಫ್ರಿಯಲ್ಲಿರುವ ಹಿಮಾಲಯನ್ ನೇಚರ್ ಪಾರ್ಕ್‌ಗೆ ರವಾನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ