ರೈತರೇ ನಮ್ಮ ಆದ್ಯತೆ ಎಂದ ಶಿವಸೇನೆ, ಮೋದಿ ಬುಲೆಟ್‌ ರೈಲು ಯೋಜನೆಗೆ ವಿಘ್ನ!

Published : Nov 28, 2019, 08:12 AM ISTUpdated : Nov 28, 2019, 08:16 AM IST
ರೈತರೇ ನಮ್ಮ ಆದ್ಯತೆ ಎಂದ ಶಿವಸೇನೆ, ಮೋದಿ ಬುಲೆಟ್‌ ರೈಲು ಯೋಜನೆಗೆ ವಿಘ್ನ!

ಸಾರಾಂಶ

ಮೋದಿ ಬುಲೆಟ್‌ ರೈಲು ಯೋಜನೆಗೆ ಈಗ ಕುತ್ತು| ಅದು ನಮ್ಮ ಆದ್ಯತೆಯಲ್ಲ: ಶಿವಸೇನೆ

ಮುಂಬೈ[ನ.28]: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್‌ ಠಾಕ್ರೆ ಅವರು ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ವಿಘ್ನ ಎದುರಾಗಿದೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

ನಮ್ಮ ಸರ್ಕಾರದ ಆದ್ಯತೆ ರೈತರೇ ಹೊರತು ಬುಲೆಟ್‌ ರೈಲು ಯೋಜನೆಯಲ್ಲ ಎಂದು ಶಿವಸೇನೆಯ ನಾಯಕ, ಮಾಜಿ ಸಚಿವ ದೀಪಕ್‌ ಕೇಸರ್ಕರ್‌ ಅವರು ತಿಳಿಸಿದ್ದಾರೆ. ಮುಂಬೈನಿಂದ ಅಹಮದಾಬಾದ್‌ಗೆ ಹೋಗಲು 3500 ರು. ತ್ಯಜಿಸಬೇಕು ಎಂದಾದಲ್ಲಿ, ವಿಮಾನದಲ್ಲಿ ಹೋಗುವ ಆಯ್ಕೆಯೂ ಇದೆ. ಹಾಗಂತ ನಾವು ಯಾವುದನ್ನೂ ವಿರೋಧಿಸುತ್ತಿಲ್ಲ. ನಮ್ಮ ಮೊದಲ ಆದ್ಯತೆ ಏನಿದ್ದರೂ ರೈತರು ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಯೋಜನಾ ವೆಚ್ಚದಲ್ಲಿ ಶೇ.25ರಷ್ಟನ್ನು ಪಾವತಿಸಬೇಕಿರುವ ಮಹಾರಾಷ್ಟ್ರ ಸರ್ಕಾರ, ಈ ಮೊತ್ತದಲ್ಲಿ ಕಡಿತ ಮಾಡುವ ಇಲ್ಲವೇ, ಯೋಜನೆಗೆ ಹಣ ನೀಡದೇ ಇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!