ಟುಕ್ಡೆ ಗ್ಯಾಂಗ್ ಎಕ್ಸ್‌ಪೋಸ್: ಭಾರತದಿಂದ ಅಸ್ಸಾಂ ಬೇರ್ಪಡಿಸುವಂತೆ ಕರೆ!

By Suvarna NewsFirst Published Jan 25, 2020, 6:39 PM IST
Highlights

ಶಹೀನ್ ಬಾಗ್’ನಲ್ಲಿ ಟುಕ್ಡೆ ಗ್ಯಾಂಗ್ ಹುನ್ನಾರ ಎಕ್ಸಪೋಸ್| ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವಂತೆ ಕರೆ| ಸಾಮಾಜಿಕ ಕಾರ್ಯಕರ್ತ ಶ್ರಜಿಲ್ ಇಮಾನ್ ವಿವಾದಾತ್ಮಕ ಹೇಳಿಕೆ| ‘5 ಲಕ್ಷ ಜನ ಸೇರಿದರೆ  ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಬೇರ್ಪಡಿಸುತ್ತೇನೆ’| ಶ್ರಜಿಲ್ ಇಮಾಮ್  ಹೇಳಿಕೆಯ ವಿಡಿಯೋ ಶೇರ್ ಮಾಡಿದ ಸಂಬೀತ್ ಪಾತ್ರಾ| 

ನವದೆಹಲಿ(ಜ.25): ಸಿಎಎ ವಿರೋಧಿ ಶಹೀನ್ ಬಾಗ್ ಹೋರಾಟದಲ್ಲಿ,  ಭಾರತವನ್ನು ಒಡೆಯುವ ಹುನ್ನಾರದ ಹೇಳಿಕೆಯನ್ನು ಗೊಣಗಿರುವುದು ತೀವ್ರ ವಿವಾದ ಸೃಷ್ಟಿಸಿದೆ.

ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರಜಿಲ್ ಇಮಾಮ್, ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಕುರಿತು ಮಾತನಾಡಿದ್ದಾರೆ.

ತಮ್ಮ ಭಾಷಣದಲ್ಲಿ ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸಿದರೆ ಸಿಎಎ ಕಾನೂನು ಸೋಲುತ್ತದೆ ಎಂದು ಶ್ರಜಿಲ್ ಇಮಾಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

दोस्तों शाहीन बाग़ की असलियत देखें:
१)असम को इंडिया से काट कर अलग करना हमारी ज़िम्मेदारी
२)”Chicken Neck” मुसलमानो का है
३)इतना मवाद डालो पटरी पे की इंडिया की फ़ौज Assam जा ना सके
४)सारे ग़ैर मुसलमानो को मुसलमानों के शर्त पर ही आना होगा
If this is not ANTI NATIONAL then what is? pic.twitter.com/kgxl3GLwx1

— Sambit Patra (@sambitswaraj)

ತಮ್ಮೊಂದಿಗೆ 5 ಲಕ್ಷ ಜನ ಸೇರಿದರೆ  ಅಸ್ಸಾಂ ಸೇರಿದಂತೆ ಸಂಪೂರ್ಣ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಕೆಲ ತಿಂಗಳುಗಳ ಮಟ್ಟಿಗಾದರೂ ಬೇರ್ಪಡಿಸುವುದಾಗಿ ಶ್ರಜಿಲ್ ಹೇಳಿದ್ದಾರೆ.

ನಾವು ದೇಶ ಧ್ವಂಸ ಮಾಡಬಲ್ಲ ಸಮುದಾಯದವರು: ಹಸನ್ ವಿವಾದಾತ್ಮಕ ಹೇಳಿಕೆ

ಶ್ರಜಿಲ್ ಇಮಾಮ್ ಅವರ ಹೇಳಿಕೆಯ ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದು, ಸಿಎಎ ವಿರೋಧಿ ಹೋರಾಟಗಾರರಿಗೆ ಭಾರತವನ್ನು ಒಡೆಯುವ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.

Assam Minister Himanta Biswa Sarma: The main organizer
of Shaheen Bagh protest (in Delhi), Sarjil has said that Assam should be cut off from the rest of India. State government has taken cognizance of this seditious statement and has decided to register a case against him. pic.twitter.com/HYq6LspNmV

— ANI (@ANI)

ಸದ್ಯ ಶ್ರಜಿಲ್ ಇಮಾಮ್  ಹೇಳಿಕೆ ವಿರುದ್ಧ ಅಸ್ಸಾಂ ಮತ್ತು ದೆಹಲಿ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!