
ಪುರಿ(ಆ.05): ಕೊರೋನಾ ವೈರಸ್ ಕಾರಣ ರಾಮ ಮಂದಿರ ಭೂಮಿ ಪೂಜೆಗೆ ಆಹ್ವಾನಿತರನ್ನು ಹೊರತು ಪಡಿಸಿ ಇತರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ಹಲವರ ತಾವಿದ್ದಲ್ಲಿಂದಲೆ ಭಕ್ತಿ ಸಮರ್ಪಿಸಿದ್ದಾರೆ. ಖ್ಯಾತ ಮರಳು ಶಿಲ್ಪಿ ಒಡಿಶಾದ ಸುದರ್ಶನ್ ಪಟ್ನಾಯಕ್ ಪುರಿ ಸಮದ್ರು ತೀರದಲ್ಲಿ ಶ್ರೀ ರಾಮ ಮಂದಿರ ಮರಳು ಶಿಲ್ಪ ರಚಿಸಿ ನಮನ ಸಲ್ಲಿಸಿದ್ದಾರೆ
ರಾಮಲಲ್ಲಾನಿಗೆ ದೀರ್ಘದಂಡ ನಮಸ್ಕಾರ, ರಾಮ ಮಂದಿರಕ್ಕೆ ಮೋದಿ ಶಿಲಾನ್ಯಾಸ!.
ಕೊರೋನಾ ವೈರಸ್ ಕಾರಣ ಪುರಿ ಸಮುದ್ರ ತೀರದಲ್ಲಿ ಶ್ರೀ ರಾಮ ಮಂದಿರ ಮರಳು ಶಿಲ್ಪಿ ರಚಿಸಿದ್ದೇನೆ. ಅಯೋಧ್ಯೆಗೆ ಬೇಟಿ ನೀಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅಯೋಧ್ಯೆಗೆ ಬೇಟಿ ನೀಡಿ ಪರಿಸರ ಸೇರಿದಂತೆ, ಮಂದಿರ ನಿರ್ಮಾಣ ಸ್ಥಳ ಎಲ್ಲವನ್ನೂ ಪರಿಶೀಲಿಸಿದ್ದೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿದ್ದಾರೆ.
ಪುರಿ ಸಮುದ್ರ ತೀರದಲಲ್ಲಿ 5 ಅಡಿ ಎತ್ತರದ ಮರಳು ಶಿಲ್ಪ ರಚಿಸಲಾಗಿದೆ. ಸತತ 5 ಗಂಟೆಗಳ ಕಾಲ ಸುದರ್ಶನ್ ಪಟ್ನಾಯಕ್ ಈ ಶ್ರೀರಾಮ ಮಂದಿರ ಮರಳು ಶಿಲ್ಪ ರಚಿಸಲು ತೆಗೆದುಕೊಂಡಿದ್ದಾರೆ.
ಹಲವು ಶತಮಾನಗಳಿಂದ ಕಾಯುತ್ತಿದ್ದ ದಿನ ಬಂದಿದೆ. ಸಂತಸ ಉಕ್ಕಿದೆ. ಸಂಭ್ರಮ ಮನೆ ಮಾಡಿದೆ. ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ಐತಿಹಾಸಿಕ ದಿನ ಎಂದು ಸುದರ್ಶನ ಪಟ್ನಾಯಕ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮರಳು ಶಿಲ್ಪದಲ್ಲಿ ಸುದರ್ಶನ ಪಟ್ನಾಯಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹಾಗೂ ಮನ್ನಣೆಗಳಿಸಿದ್ದಾರೆ. 60ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿರುವ ಸುದರ್ಶನ ಪಟ್ನಾಯಕ್ ಅತ್ಯಂತ ಜನಪ್ರಿಯ ಮರಳು ಶಿಲ್ಪಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ