ಚುನಾವಣಾ ಭಾಷಣದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾಡೋರನ್ನು ನಿರ್ಬಂಧಿಸಲು ಸದ್ಗುರು ಮನವಿ

Published : Apr 09, 2024, 04:03 PM IST
ಚುನಾವಣಾ ಭಾಷಣದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತಾಡೋರನ್ನು ನಿರ್ಬಂಧಿಸಲು ಸದ್ಗುರು ಮನವಿ

ಸಾರಾಂಶ

ರಾಜಕೀಯ ನಾಯಕರು ಮಹಿಳೆಯರ ಬಗ್ಗೆ ತೀರಾ ಆಕ್ಷೇಪಾರ್ಹ ಭಾಷೆಗಳನ್ನು ಬಳಸುತ್ತಿರುವುದರ ವಿರುದ್ಧ ಇಶಾ ಫೌಂಡೇಶನ್‌ನ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ದನಿ ಎತ್ತಿದ್ದಾರೆ.  

ಕಳೆದೆರಡು ವಾರಗಳಿಂದ ಚುನಾವಣಾ ಭಾಷಣಗಳಲ್ಲಿ ರಾಜಕೀಯ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರೆಚಿ ಮಾತಾಡುವಾಗ ಮಹಿಳೆಯರ ಬಗ್ಗೆ ತೀರಾ ಆಕ್ಷೇಪಾರ್ಹ ಭಾಷೆಗಳನ್ನು ಬಳಸುತ್ತಿರುವುದರ ವಿರುದ್ಧ ಇಶಾ ಫೌಂಡೇಶನ್‌ನ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ದನಿ ಎತ್ತಿದ್ದಾರೆ.

ಮಿದುಳಿನ ಶಸ್ತ್ರಚಿಕಿತ್ಸೆಯ ನಂತರ ಅವರು ಮಾತನಾಡುತ್ತಿರುವ ಮೊದಲ ಪ್ರಮುಖ ವೀಡಿಯೊದಲ್ಲಿ, 2024ರ ರಾಷ್ಟ್ರೀಯ ಚುನಾವಣೆಯ ಮೊದಲು ಭಾರತೀಯ ರಾಜಕೀಯ ಭಾಷಣದಲ್ಲಿ ಮಹಿಳಾ ನಾಯಕರ ಬಗ್ಗೆ ಹೆಚ್ಚುತ್ತಿರುವ ಲೈಂಗಿಕ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಸದ್ಗುರು ಖಂಡಿಸಿದ್ದಾರೆ. 

ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ
 

'ಕಳೆದ ಎರಡು ವಾರಗಳಲ್ಲಿ, ಜನರು ಮಹಿಳೆಯರ ಬಗ್ಗೆ ಬಳಸುತ್ತಿರುವ ಪದಗಳ ಪ್ರಕಾರವನ್ನು ನಾನು ಕೇಳುತ್ತಿದ್ದೇನೆ. ಯಾರೋ 'ರೇಟ್ ಕಾರ್ಡ್' ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಬೇರೊಬ್ಬರು 75 ವರ್ಷದ ಮಹಿಳೆಯ ಬಗ್ಗೆ ಅಸಹ್ಯಕರ ಮಾತುಗಳನ್ನು ಹೇಳುತ್ತಿದ್ದಾರೆ. ಇನ್ನೊಬ್ಬರು 60 ವರ್ಷ ವಯಸ್ಸಿನ ರಾಜಕಾರಣಿಯ ಪೋಷಕರ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಯಾವ ಪಕ್ಷಕ್ಕೆ ಸೇರಿದವರು ಎಂಬುದು ಮುಖ್ಯವಲ್ಲ, ದಯವಿಟ್ಟು ಈ ಜನರನ್ನು ನಿರ್ಬಂಧಿಸಿ' ಎಂದು ಸದ್ಗುರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಫ್ಯಾಮಿಲಿ ಎಮರ್ಜೆನ್ಸಿ ಎಂದು ರಜೆ ಹಾಕಿ ಐಪಿಎಲ್ ಮ್ಯಾಚ್‌ಗೆ ಹೋದ ಮಹಿಳೆ; ಲೈವ್ ಟಿವಿಯಲ್ಲಿ ಬಾಸ್ ಕಣ್ಣಿಗೆ ಬಿದ್ಲು!

ಸದ್ಗುರುಗಳ ಮನವಿಯು ಇತ್ತೀಚಿನ ಹಲವಾರು ನಿದರ್ಶನಗಳ ಹಿನ್ನೆಲೆಯಲ್ಲಿ ಪಕ್ಷದ ವ್ಯಾಪ್ತಿಯನ್ನು ಮೀರಿ ರಾಜಕೀಯ ವ್ಯಕ್ತಿಗಳು ಮಹಿಳಾ ನಾಯಕರ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನು ಬಳಸುವುದರ ಬಗೆಗಾಗಿದೆ. ಈ ರೀತಿ ಮಾತನಾಡುವವರನ್ನು ನಿರ್ಬಂಧಿಸುವಂತೆ, ಅವರ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಸೇರಿದಂತೆ ಎಲ್ಲರಿಂದ ಕ್ರಮವನ್ನು ಅವರು ಒತ್ತಾಯಿಸಿದ್ದಾರೆ.
ತುರ್ತು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಸದ್ಗುರುಗಳು, ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂಬ ಹಾರೈಕೆಗಳು ಪ್ರಪಂಚದಾದ್ಯಂತದ ಜನರಿಂದ ಹರಿದುಬರುತ್ತಲೇ ಇವೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು