ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳ ನುಸುಳಿವಿಕೆ ಕಾರಣ : ಶಾ

Kannadaprabha News   | Kannada Prabha
Published : Oct 11, 2025, 04:47 AM IST
Amit Shah

ಸಾರಾಂಶ

ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನವದೆಹಲಿ : ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳಕ್ಕೆ ಒಳನುಸುಳುವಿಕೆಯೇ ಕಾರಣ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದಕ್ಕೆಂದೇ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ದೈನಿಕ್‌ ಜಾಗರಣ್‌ ಏರ್ಪಡಿಸಿದ್ದ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಭಾರತದಲ್ಲಿ ಮುಸ್ಲಿಮರ ಹೆಚ್ಚಳಕ್ಕೆ ಒಳನುಸುಳುವಿಕೆ ಪ್ರಮುಖ. ಸ್ವಾತಂತ್ರ್ಯದ ನಂತರ ನಡೆದ ಜನಗಣತಿಯಲ್ಲಿ ಇದು ಕಂಡುಬರುತ್ತದೆ. 1951 ರಲ್ಲಿ, ಹಿಂದೂಗಳು ಶೇ. 84ರಷ್ಟಿದ್ದರೆ, ಮುಸ್ಲಿಮರು ಶೇ. 9.8ರಷ್ಟಿದ್ದರು. 1971 ರಲ್ಲಿ ಹಿಂದೂಗಳು 82% ಹಾಗೂ ಮುಸ್ಲಿಮರು ಶೇ.11ರಷ್ಟಿದ್ದರು.

1991ರಲ್ಲಿ, ಹಿಂದೂಗಳ ಸಂಖ್ಯೆ ಶೇ.81ಕ್ಕೆ ಕುಸಿದರೆ, ಮುಸ್ಲಿಮರ ಸಂಖ್ಯೆ ಶೇ.12.21ಕ್ಕೇರಿತು. 2011ರಲ್ಲಿ ಹಿಂದುಗಳ ಸಂಖ್ಯೆ ಶೇ.79ಕ್ಕೆ ಇಳಿದು, ಮುಸ್ಲಿಮರ ಸಂಖ್ಯೆ ಶೇ.14.2ಕ್ಕೆ ಏರಿತು. 2011ರ ಜನಗಣತಿಯಲ್ಲಿ ಮುಸ್ಲಿಂ ಸಂಖ್ಯೆ ಏರಿಕೆ ಪ್ರಮಾಣ ಶೇ.24.6 ಇದ್ದರೆ ಹಿಂದುಗಳ ಜನಸಂಖ್ಯೆ ಏರಿಕೆ ಗತಿ ಶೇ.16.8ರಷ್ಟು ಇತ್ತು. ಅಸ್ಸಾಂ, ಬಂಗಾಳದಂಥ ಗಡಿಯಲ್ಲಿ ಮುಸ್ಲಿಂ ಸಖ್ಯೆ ಏರಿಕೆ ವಿಪರೀತವಾಗಿದೆ. ಒಳನುಸುಳುವಿಕೆ ಇಲ್ಲದೇ ಇದು ಸಾಧ್ಯವೇ ಇಲ್ಲ. ಇದಕ್ಕೆ ಕೆಲವು ಪಕ್ಷಗಳ ಮತಬ್ಯಾಂಕ್‌ ರಾಜಕೀಯ ಕಾರಣ’ ಎಂದರು. ಈ ಮೂಲಕ, ’ಒಳನುಸುಳುವಿಕೆಗೆ ಸರಿಯಾಗಿ ಗಡಿ ಕಾಯದ ಕೇಂದ್ರ ಸರ್ಕಾರದ ಅಡಿ ಬರುವ ಬಿಎಸ್‌ಎಫ್‌ ನಿರ್ಲಕ್ಷ್ಯ ಕಾರಣ’ ಎಂದ ಟಿಎಂಸಿ ನಾಯಕಿ ಮಮತಾ ಬ್ಯಾಣರ್ಜಿಗೆ ತಿರುಗೇಟು ನೀಡಿದರು.

‘ಮತಪಟ್ಟಿ ಪರಿಷ್ಕರಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಏಕೆಂದರೆ ಇದು ದೇಶ ಹಿತಕ್ಕೆ ಸೇರಿದ ಆಂದೋಲನ. ಅಕ್ರಮ ವಲಸಿಗರನ್ನು ಮತಪಟ್ಟಿಯಿಂದ ಹೊರಹಾಕಲಾಗುತ್ತದೆ. ಮಾತ್ರವಲ್ಲದೆ ದೇಶದಿಂದಲೇ ಗಡೀಪಾರು ಮಾಡಲಾಗುತ್ತದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!