ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ರೂಪುರೇಷೆ

Published : Nov 14, 2019, 07:23 AM IST
ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ರೂಪುರೇಷೆ

ಸಾರಾಂಶ

ರಾಮಮಂದಿರ ರೂಪುರೇಷೆ ತಯಾರಿಗೆ ವಿಶ್ವಹಿಂದೂ ಪರಿಷತ್ ಚಿಂತನೆ ನಡೆಸಿದ್ದು ಮಂಗಳೂರಿನಲ್ಲಿ ಡಿಸೆಂಬರ್ ಅಂತ್ಯ ದಲ್ಲಿ ನಡೆಯಲಿರುವ ಪರಿಷತ್‌ನ ಕೇಂದ್ರೀಯ ಮಂಡಳಿ ಬೈಠಕ್‌ನಲ್ಲಿ ಈ ಬಗ್ಗೆ ತೀರ್ಮಾನವಾಗುವ ಸಂಭವ ಇದೆ. 

ಮಂಗಳೂರು [ನ.14]:  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿರುವ ಬೆನ್ನಲ್ಲೇ ಮಂದಿರದ ರೂಪುರೇಷೆ ತಯಾರಿಗೆ ವಿಶ್ವಹಿಂದೂ ಪರಿಷತ್(ವಿಹಿಂಪ) ಚಿಂತನೆ ನಡೆಸಿದ್ದು ಮಂಗಳೂರಿನಲ್ಲಿ ಡಿಸೆಂಬರ್ ಅಂತ್ಯ ದಲ್ಲಿ ನಡೆಯಲಿರುವ ಪರಿಷತ್‌ನ ಕೇಂದ್ರೀಯ ಮಂಡಳಿ ಬೈಠಕ್‌ನಲ್ಲಿ ಈ ಬಗ್ಗೆ ತೀರ್ಮಾನವಾಗುವ ಸಂಭವ ಇದೆ. 

ವಿಹಿಂಪದ ಕೇಂದ್ರೀಯ ಮಂಡಳಿ ಬೈಠಕ್ ವರ್ಷಂಪ್ರತಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಈ ಬಾರಿ ಆರು ತಿಂಗಳು ಮೊದಲೇ ಮಂಗಳೂರಿನಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಈಗ ಅಯೋಧ್ಯೆ ತೀರ್ಪು ಮಂದಿರ ನಿರ್ಮಾಣ ಪರವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ ಈ ಬೈಠಕ್ ಮಹತ್ವ ಪಡೆದುಕೊಂಡಿದೆ. ಡಿ.25ರಿಂದ 30ರವರೆಗೆ ಮಂಗಳೂರಿನ ಸಂಘನಿಕೇತನದಲ್ಲಿ ೫ ದಿನಗಳ ಕಾಲ ವಿಹಿಂಪ ಕೇಂದ್ರೀಯ ಮಂಡಳಿ ಸಭೆ ನಡೆಯಲಿದೆ.  

ನಿಜಾನಾ?: ಅಯೋಧ್ಯೆ ತೀರ್ಪಿಗೆ ಹಿಂದೂ ಮಹಾಸಭಾ ಮೇಲ್ಮನವಿ?...

ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಕಾರ್ಯವಾಹ ಭೈಯ್ಯಾಜಿ ಜೋಶಿ ಮಾರ್ಗದರ್ಶನ ಮಾಡಲಿದ್ದು, ಸುಮಾರು 400 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರಾಂತೀಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.

ಪೇಜಾವರಶ್ರೀ ಉದ್ಘಾಟನೆ: ಡಿ.27ರಂದು ವಿಹಿಂಪ ಅಂತಾರಾಷ್ಟ್ರೀಯ ಮಟ್ಟದ ಬೈಠಕ್ ನಡೆಯಲಿದ್ದು, ಇದನ್ನು ವಿಹಿಂಪ ಮಾರ್ಗದರ್ಶಕ ಮಂಡಳಿ ಸದಸ್ಯರಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಬಳಿಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕುರಿತ ಮಹತ್ವಪೂರ್ಣ ಚರ್ಚೆ ನಡೆಯುವ ಸಂಭವ ಇದೆ ಎನ್ನಲಾಗಿದೆ. ರಾಮಮಂದಿರ ನಿರ್ಮಾಣ, ಅದರ ಪೂರ್ವಸಿದ್ಧತೆ, ರೂಪುರೇಷೆ, ಶಿಲಾನ್ಯಾಸ ಸೇರಿದಂತೆ ಪ್ರಮುಖ ನಿರ್ಧಾರಗಳು ಮಂಗಳೂರಿನ ಈ ಬೈಠಕ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವಿಹಿಂಪ ಮೂಲಗಳು ತಿಳಿಸಿವೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿಹಿಂಪ ಕೇಂದ್ರೀಯ ಮಂಡಳಿ ಬೈಠಕ್ ನಡೆಯುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೊಟ್ಟೆಪಾಡಿಗಾಗಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಗುಲಾಬಿ ಹೂ ಮಾರುತ್ತಿದ್ದ 11 ವರ್ಷದ ಬಾಲಕಿಯ ಅಪಹರಿಸಿ ಅತ್ಯಾ*ಚಾರ
ಡ್ರಾಪ್ ಬೇಡ ಬೈಕೇ ಬೇಕು: ಹೆದ್ದಾರಿಯಲ್ಲಿ ಅಡ್ಡಹಾಕಿ ಬೈಕ್ ನೀಡುವಂತೆ ಪೀಡಿಸಿದ ಮಹಿಳೆ: ಆಮೇಲಾಗಿದ್ದೇನು?