ಎಂಡಿಎಚ್‌, ಎವರೆಸ್ಟ್‌ ಮಸಾಲಾ ಅಸುರಕ್ಷಿತ: ರಾಜಸ್ಥಾನ ಸರ್ಕಾರ

Published : Jun 15, 2024, 10:27 AM ISTUpdated : Jun 15, 2024, 10:29 AM IST
ಎಂಡಿಎಚ್‌, ಎವರೆಸ್ಟ್‌ ಮಸಾಲಾ ಅಸುರಕ್ಷಿತ: ರಾಜಸ್ಥಾನ ಸರ್ಕಾರ

ಸಾರಾಂಶ

ರಾಜಸ್ಥಾನದ ಹಿರಿಯ ಆರೋಗ್ಯ ಅಧಿಕಾರಿ ಶುಭ್ರಾ ಸಿಂಗ್‌ ಅವರು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೈಪುರ: ದೇಶದಲ್ಲಿ ಹೆಚ್ಚು ಮಾರಾಟವಾಗುವ ಜನಪ್ರಿಯ ಸಂಬಾರ ಪದಾರ್ಥಗಳಾದ ಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ಕೆಲವೊಂದು ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲ ಎಂದು ರಾಜಸ್ಥಾನ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದೆ. ಈ ಎರಡೂ ಕಂಪನಿಗಳ ಉತ್ಪನ್ನಗಳ ಬಗ್ಗೆ ಸ್ವದೇಶ ಹಾಗೂ ವಿದೇಶಗಳಲ್ಲೂ ಕೆಲ ದಿನಗಳಿಂದ ದೂರುಗಳು ಇವೆ. ಇದರ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ಪತ್ರ ಬರೆದಿರುವುದು ಗಮನಾರ್ಹವಾಗಿದೆ.

ಈ ಎರಡೂ ಕಂಪನಿಗಳ ಕೆಲವೊಂದು ಉತ್ಪನ್ನಗಳ ಮಾದರಿಗಳನ್ನು ರಾಜಸ್ಥಾನ ಸರ್ಕಾರ ಪರೀಕ್ಷೆಗೆ ಒಳಪಡಿಸಿದೆ. ಅವು ಬಳಕೆಗೆ ಸುರಕ್ಷಿತವಲ್ಲ ಎಂಬ ಅಂಶ ಕಂಡುಬಂದಿದೆ. ಹೀಗಾಗಿ ರಾಜಸ್ಥಾನದ ಹಿರಿಯ ಆರೋಗ್ಯ ಅಧಿಕಾರಿ ಶುಭ್ರಾ ಸಿಂಗ್‌ ಅವರು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಎಂಡಿಎಚ್‌ ಕಂಪನಿಯ 2 ಹಾಗೂ ಎವರೆಸ್ಟ್‌ ಕಂಪನಿಯ ಒಂದು ಮಸಾಲಾ ಉತ್ಪನ್ನಗಳ ಮಾರಾಟವನ್ನು ಹಾಂಕಾಂಗ್ ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಿತ್ತು. ಕ್ಯಾನ್ಸರ್‌ಕಾರಕ ಕ್ರಿಮಿನಾಶಕವಾಗಿರುವ ಎಥಿಲಿನ್‌ ಆಕ್ಸೈಡ್‌ ಈ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು.

ಕೇಂದ್ರದಿಂದ ಕ್ಲೀನ್‌ಚಿಟ್

ಹಾಂಕಾಂಗ್‌, ನೇಪಾಳ ಮತ್ತು ಸಿಂಗಾಪುರ ನಿಷೇಧದ ನಡುವೆಯೇ ಮಸಾಲೆ ಪದಾರ್ಥಗಳಾದ ಎಂಡಿಎಚ್‌, ಎವರೆಸ್ಟ್‌ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಿಳಿಸುವ ಮೂಲಕ ಕ್ಲೀನ್‌ಚಿಟ್ ನೀಡಲಾಗಿತ್ತು.

ಕ್ಯಾನ್ಸರ್‌ ಬರುವ ಅಂಶ ಪತ್ತೆ, ಎವರೆಸ್ಟ್, ಎಂಡಿಎಚ್‌ ಮಸಾಲೆಗೆ ನೇಪಾಳ ನಿಷೇಧ

ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಎವರೆಸ್ಟ್‌ ಮತ್ತು ಎಂಡಿಎಚ್‌ ಕಂಪನಿಯ ಆಹಾರ ಪದಾರ್ಥಗಳ 34 ಸ್ಯಾಂಪಲ್‌ಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್‌ ಆಕ್ಸೈಡ್‌ ಇರುವುದು ಪತ್ತೆಯಾಗಿಲ್ಲ. ಹೊರದೇಶಗಳಲ್ಲಿ ನಿಷೇಧಿಸಲಾಗಿರುವ ಇತರೆ ಮಸಾಲೆ ಪದಾರ್ಥಗಳ 300 ಸ್ಯಾಂಪಲ್‌ಗಳನ್ನೂ ಪರೀಕ್ಷೆ ಮಾಡಲಾಗಿದೆ. ಅದರಲ್ಲೂ ಯಾವುದೇ ಮಾರಣಾಂತಿಕ ರಾಸಾಯನಿಕ ಅಂಶಗಳಿರುವುದು ಕಂಡುಬಂದಿಲ್ಲ ಎಂದು ದೃಢೀಕರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ