
ತಿರುಮಲ: ನಟಿ ಹಾಗೂ ಹಿಂದಿನ ಜಗನ್ಮೋಹನ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವೆ ಆಗಿದ್ದ ರೋಜಾ ಅವರು ಪ್ರತಿ ವಾರ ತಿರುಮಲಕ್ಕೆ ಸುಮಾರು 100 ಜನರೊಂದಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದ ವಿಷಯ ಈಗ ಮುನ್ನೆಲೆಗೆ ಬಂದಿದೆ. ರೋಜಾ ದರ್ಶನ ಟಿಕೆಟ್ ವಿಷಯದಲ್ಲಿ ಅಕ್ರಮ ಎಸಗಿದ್ದು, ತನಿಖೆ ನಡೆಸಬೇಕು ಎಂದು ಅವರ ವಿರೋಧಿಗಳು ಆಗ್ರಹಿಸಿದ್ದಾರೆ.
ರೋಜಾ ಇತ್ತೀಚಿನ ಆಂಧ್ರ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಸೋಲಿಗೂ ಮುನ್ನ ಹಲವು ತಿಂಗಳು ಕಾಲ ಪ್ರತಿ ವಾರ ಸುಮಾರು 100 ಕಾರ್ಯಕರ್ತರೊಂದಿಗೆ ಅವರು ತಿರುಮಲಕ್ಕೆ ಭೇಟಿ ನೀಡುತ್ತಿದ್ದರು. ಗಣ್ಯರಿಗೆ ಇರುವ ‘ಶಿಷ್ಟಾಚಾರ ದರ್ಶನ’ ಮಾಡುತ್ತಿದ್ದರು. ತಾವು ಕರೆತರುತ್ತಿದ್ದ ಬೆಂಬಲಿಗರಿಗೆ ವಿಶೇಷ ಟಿಕೆಟ್ ಕೊಡಿಸುತ್ತಿದ್ದರು. ಆದರೆ ಟಿಕೆಟ್ಗಾಗಿ ಅವರು ಮೊದಲೇ ಪ್ರತಿ ವಾರ ಸಾವಿರಾರು ರುಪಾಯಿ ಸಂಗ್ರಹಿಸುತ್ತಿದ್ದರು. ಈ ರೀತಿ ಸಾಕಷ್ಟು ದುಡ್ಡನ್ನು ಅವರು ಟಿಕೆಟ್ ನೆಪದಲ್ಲಿ ಸಂಗ್ರಹಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ನೂತನ ಟಿಡಿಪಿ ಸರ್ಕಾರಕ್ಕೆ ಅವರ ವಿರೋಧಿಗಳು ಆಗ್ರಹಿಸಿದ್ದಾರೆ.
ಈ ಪ್ರೋಟೋಕಾಲ್ ದರ್ಶನದ ವ್ಯವಸ್ಥೆಯನ್ನು ಬಳಸಿಕೊಂಡು ರೋಜಾ ಸಾಕಷ್ಟು ಹಣ ಗಳಸಿದ್ದಾರೆ ಎಂಬ ಆರೋಪವಿದೆ. ಇದುವರೆಗೂ ರೋಜಾ ಪಡೆದ ದರ್ಶನದ ಬಗ್ಗೆ ತನಿಖೆ ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರೋಜಾ ಜೊತೆ ಪ್ರತಿವಾರ ದರ್ಶನಕ್ಕೆ ಬರುತ್ತಿದ್ದ ಎಲ್ಲಾ ಜನರ ಆಧಾರ್ ಕಾರ್ಡ್ ವಿವರಗಳು ಟಿಟಿಡಿಯಲ್ಲಿ ಲಭ್ಯವಿದ್ದರೆ, ಎಲ್ಲರನ್ನು ಸುಲಭವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ