
ಜೈಪುರ(ಆ.07): ರಾಜಸ್ಥಾನ ಸರ್ಕಾರ ‘ಭಿಕ್ಷಾಟನೆ ನಿರ್ಮೂಲನೆ’ ಕಾರ್ಯಕ್ರಮದಡಿಯಲ್ಲಿ ವಿವಿಧ ಪ್ರಾಂತ್ಯಗಳ 60 ವಸತಿರಹಿತ ಭಿಕ್ಷುಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನೂ ಕೂಡ ಕಲ್ಪಿಸಿದೆ. ಭಿಕ್ಷುಕರು ಗೌರವಾನ್ವಿತ ಬದುಕು ಸಾಗಿಸಲು ಬೇಕಿರುವ ತರಬೇತಿ ನೀಡುವುದು ಯೋಜನೆಯ ಉದ್ದೇಶವಾಗಿದೆ.
ಈ ನಿಟ್ಟಿನಿಂದ ಕೆಲವು ತಿಂಗಳುಗಳ ಹಿಂದೆ ರಾಜಸ್ತಾನದ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ನಿಗಮ, ಸೋಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಅಭಿಯಾನವನ್ನು ಆರಂಭಿಸಿತ್ತು.
100 ಜನ ಭಿಕ್ಷುಕರ ಪೈಕಿ ಒಂದು ವರ್ಷಗಳ ತರಬೇತಿಯ ಬಳಿಕ 60 ಭಿಕ್ಷುಕರಿಗೆ ಉದ್ಯೋಗವನ್ನು ನೀಡಲಾಗಿದೆ. ಉಳಿದವರಿಗೆ ತರಬೇತಿ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ