ಹರಿದ್ವಾರಕ್ಕೆ ಹಿಂದೂಯೇತರರ ಪ್ರವೇಶ ನಿಷೇಧಕ್ಕೆ ಚಿಂತನೆ

Kannadaprabha News   | Kannada Prabha
Published : Jan 05, 2026, 05:38 AM IST
  haridwar

ಸಾರಾಂಶ

ಉತ್ತರಾಖಂಡ ಸರ್ಕಾರವು ನಗರದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಹರಿದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಹರಿದ್ವಾರ: ಉತ್ತರಾಖಂಡ ಸರ್ಕಾರವು ನಗರದ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದಿಂದ ಹರಿದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

105 ಗಂಗಾ ಘಾಟ್‌ಗಳಿಗೂ ಈ ನಿರ್ಬಂಧ

ಪ್ರಸ್ತುತ ಹರಿದ್ವಾರ ಮುನ್ಸಿಪಲ್ ಕಾರ್ಪೊರೇಷನ್‌ನ ನಿಯಮಗಳ ಪ್ರಕಾರ, ಹರ್ ಕಿ ಪೌರಿ ಸೇರಿದಂತೆ ಕೆಲವು ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶ ನಿರ್ಬಂಧಿಸಲಾಗಿದೆ. ಹೊಸ ಪ್ರಸ್ತಾವದ ಪ್ರಕಾರ, ಹರಿದ್ವಾರದಿಂದ ಹೃಷಿಕೇಶದವರೆಗಿನ ಎಲ್ಲ 105 ಗಂಗಾ ಘಾಟ್‌ಗಳಿಗೂ ಈ ನಿರ್ಬಂಧ ವಿಸ್ತರಿಸಲಾಗುತ್ತದೆ.

ವಾರ್ಷಿಕ ಸುಮಾರು 4 ಕೋಟಿ ಯಾತ್ರಿಗಳು

ಹರಿದ್ವಾರಕ್ಕೆ ವಾರ್ಷಿಕ ಸುಮಾರು 4 ಕೋಟಿ ಯಾತ್ರಿಗಳು ಬರುತ್ತಾರೆ. ಇದು ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರ ಪ್ರವಾಸಿಗರ ಉಪಸ್ಥಿತಿ ಕೆಲವು ವಿವಾದಗಳಿಗೆ ಕಾರಣವಾಗಿದೆ. ಹೀಗಾಗಿ ಸರ್ಕಾರ ನಿರ್ಬಂಧ ವಿಸ್ತರಣೆಗೆ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಕಾಶಕ್ಕೆ ಕನ್ನಡಿ ಹಾಕಿ ಭೂಮಿಗೆ ಟಾರ್ಚ್‌ ಹಿಡಿಯುವ ಪ್ರಯೋಗಕ್ಕೆ ಅಮೆರಿಕಾ ಒಪ್ಪಿಗೆ
Cyananthus Hookeri: 158 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಅರಳಿದ ಅಪರೂಪದ ಹೂವು!