'ಆಶೀರ್ವಾದ್ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ, ಗೆಳೆಯ ರಾಮ್‌ವಿಲಾಸ್‌ ನೆನೆದ ಪಿಎಂ!

Published : Jul 05, 2021, 02:54 PM IST
'ಆಶೀರ್ವಾದ್ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ, ಗೆಳೆಯ ರಾಮ್‌ವಿಲಾಸ್‌ ನೆನೆದ ಪಿಎಂ!

ಸಾರಾಂಶ

* ಗೆಳೆಯ ರಾಮ್‌ ವಿಮಾಸ್‌ ಪಪಾಸ್ವಾನ್ ನೆನಪಿಸಿಕೊಂಡ ಪಿಎಂ ಮೋದಿ * ಚಿರಾಗ್ ಆರಂಭಿಸಿದ 'ಆಶೀರ್ವಾದ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ * ಆಶೀರ್ವಾದ್ ಯಾತ್ರೆ ಮೂಲಕ ಚಿರಾಗ್‌ ಶಕ್ತಿ ಅಂದಾಜಿಸಲಿದೆ ಬಿಜೆಪಿ

ಲಕ್ನೋ(ಜು.05): ರಾಮ್‌ ವಿಲಾಸ್‌ ಪಾಸ್ವಾನ್ ನಿಧನದ ಬಳಿಕ ಎಲ್‌ಜೆಪಿಯಲ್ಲಿ ಭಿನ್ನಮತ ತಲೆದೋರಿದೆ. ಈ ಬಿರುಕಿನ ಬಳಿಕ ಅವರ ಪುತ್ರ ಸಂಸದ ಚಿರಾಗ್‌ ಪಾಸ್ವಾನ್ ಮೊದಲ ಬಾರಿಒ ತಮ್ಮ ಶಕ್ತಿ ಪ್ರದರ್ಶನಕ್ಕೆ ಯಾತ್ರೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಪಿಎಂ ಮೋದಿ ಮಾಡಿದ ಟ್ವೀಟ್‌ ಅವರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಪಿಎಂ ಮೋದಿ ರಾಮ್‌ ವಿಲಾಸ್‌ ಪಾಸ್ವಾನ್‌ರನ್ನು ಅವರ ಜನ್ಮ ದಿನದಂದು ನೆನಪಿಸಿಕೊಳ್ಳುತ್ತಾ ಟ್ವೀಟ್ ಮಾಡಿದ್ದು, ಇಂದು ನನ್ನ ಗೆಳೆಯ ಸ್ವರ್ಗೀಯ ರಾಮ್‌ ವಿಲಾಸ್‌ ಪಾಸ್ವಾನ್ ಜಯಂತಿ. ಅವರ ಅನುಪಸ್ಥಿತಿ ಬಹಳಷ್ಟು ಕಾಡುತ್ತದೆ. ಅವರು ಭಾರತದ ಅತ್ಯಂತ ಅನುಭವಿ ಶಾಸಕ ಹಾಗೂ ಸಚಿವರಲ್ಲಿ ಒಬ್ಬರಾಗಿದ್ದರು. ಜನಸೇವೆ ಹಾಗೂ ದಲಿತರನ್ನು ಮೇಲೆತ್ತುವಲ್ಲಿ ಅವರ ಕೊಡುಗೆ ಮರೆಯಲಸಾಧ್ಯ ಎಂದಿದ್ದಾರೆ.

ಆಶೀರ್ವಾದ್ ಯಾತ್ರೆ ಮೂಲಕ ಚಿರಾಗ್‌ ಶಕ್ತಿ ಅಂದಾಜಿಸಲಿದೆ ಬಿಜೆಪಿ 

ಎಲ್ಲಾ ಪಕ್ಷಗಳು ಚಿರಾಗ್ ಪಾಸ್ವಾನ್ ಅವರ ಆಶೀರ್ವಾದ್ ಯಾತ್ರೆ ಮೇಲೆ ಕಣ್ಣಿಟ್ಟಿವೆ. ಆದರೆ ಬಿಜೆಪಿ ಇದರ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಈ ಮೂಲಕ ಚಿರಾಗ್‌ ರಾಜಕೀಯ ಶಕ್ತಿಯ ಬಗ್ಗೆ ಒಂದು ಕಲ್ಪನೆ ಸಿಗಲಿದೆ. ಅವರ ಅತ್ತ ಚಿಕ್ಕಪ್ಪ ಪಶುಪತಿ ಪರಾಸ್ ಅವರು 5 ಸಂಸದರೊಂದಿಗೆ ಚಿರಾಗ್‌ನಿಂದ ಬೇರ್ಪಟ್ಟಿದ್ದು, ಎಲ್‌ಜೆಪಿ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದಾರೆಂಬುವುದು ಉಲ್ಲೇಖನೀಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಚಿರಾಗ್ ಚುನಾವಣಾ ಆಯೋಗದ ಆಶ್ರಯದಲ್ಲಿದ್ದಾರೆ. ಈ ಯಾತ್ರೆ ಬಳಿಕ, ಚಿರಾಗ್ ಅವರೊಂದಿಗೆ ಇರುತ್ತಾರಾ? ಬೇರ್ಪಡುತ್ತಾರಾ ಎಂಬುವುದು ನಿರ್ಧಾರವಾಗಲಿದೆ. ಹೀಗಿರುವಾಗ, ಚುನಾವಣಾ ಆಯೋಗವು ಎಲ್ಜೆಪಿ ಮೇಲೆ- ಚಿರಾಗ್ ಅಥವಾ ಪಶುಪತಿ ಇವರಿಬ್ಬರಲ್ಲಿ ಯಾರಿಗೆ ಹಕ್ಕಿದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

ಮೋದಿ ಆಪ್ತನನ್ನು ಭೇಟಿಯಾಗಿದ್ದಾರೆ ಚಿರಾಗ್

ಇದಕ್ಕೂ ಮುನ್ನ, ಚಿರಾಗ್ ಪಾಸ್ವಾನ್ ಅವರು ಕಳೆದ ವಾರ ಏಕಾಏಕಿ ಅಹಮದಾಬಾದ್‌ಗೆ ಭೇಟಿ ನೀಡಿದ್ದರು, ಮೋದಿಯವರ ಆಪ್ತರಾದ ಪರಿಂದು ಭಗತ್ ಅವರನ್ನು ಭೇಟಿಯಾಗಿದ್ದರು. ಭಗತ್ ಅವರನ್ನು ಬಿಜೆಪಿಯಲ್ಲಿ ಚುನಾವಣಾ ಬಿಕ್ಕಟ್ಟು ನಿರ್ವಹಣೆಯಲ್ಲಿ ಪರಿಣಿತರೆಂದು ಪರಿಗಣಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು