
ಮಹಾಕುಂಭ ನಗರ: 2025ರ ಮಹಾಕುಂಭದ ಪ್ರತಿ ಕ್ಷಣವೂ ವಿಶೇಷ. ಶನಿವಾರ ಫಾಲ್ಗುಣ ಕೃಷ್ಣ ತೃತೀಯಾ ಅಂಗವಾಗಿ ಒಂದೆಡೆ ದಂಡಿ ಸ್ವಾಮಿಗಳ ತ್ರಿಜಟಾ ಸ್ನಾನ ನೆರವೇರಿದರೆ, ಇನ್ನೊಂದೆಡೆ ರಾಜಕೀಯ ಗಣ್ಯರ ದಂಡೇ ಮಹಾಕುಂಭಕ್ಕೆ ಬಂದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪತ್ನಿ ಸೋನಲ್ ಶಾ, ಕೇಂದ್ರ ಸಚಿವ ಹರ್ದೀಪ್ ಪುರಿ ಅವರು ಪತ್ನಿಯೊಂದಿಗೆ, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಚಿರಾಗ್ ಪಾಸ್ವಾನ್, ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ, ಅಪರ್ಣಾ ಯಾದವ್ ಮತ್ತು ಮಹಾರಾಷ್ಟ್ರದ ಸಚಿವ ನಿತೇಶ್ ನಾರಾಯಣ್ ರಾಣೆ ಸೇರಿದಂತೆ ಹಲವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಮಹಾಕುಂಭದ ಬಗ್ಗೆ ಗಣ್ಯರ ಅಭಿಪ್ರಾಯ
ವೈಯಕ್ತಿಕವಾಗಿ ನನಗೆ ಇದು ತುಂಬಾ ಸಂತೋಷದ ಕ್ಷಣ. ಮಹಾಕುಂಭದಲ್ಲಿ ಸ್ನಾನ ಮಾಡಿದ್ದು ಒಂದು ಭಾಗ್ಯ. ಯೋಗಿ ಸರ್ಕಾರ ಉತ್ತಮ ಕೆಲಸ ಮಾಡ್ತಿದೆ. - ಹರ್ದೀಪ್ ಪುರಿ, ಕೇಂದ್ರ ಸಚಿವರು
ಮಹಾಕುಂಭಕ್ಕೆ ಬಂದು ಅಲೌಕಿಕ ಆನಂದ ಪಡೆದೆ. ಇಲ್ಲಿನ ವ್ಯವಸ್ಥೆ ತುಂಬಾ ಚೆನ್ನಾಗಿದೆ. - ಲಕ್ಷ್ಮಿ ಪುರಿ, ಹರ್ದೀಪ್ ಪುರಿ ಅವರ ಪತ್ನಿ
ನಮ್ಮ ಜೀವನದಲ್ಲಿ ಮಹಾಕುಂಭ ನೋಡಲು ಸಿಕ್ಕಿದ್ದು ತುಂಬಾ ಅದೃಷ್ಟ. ಇಲ್ಲಿನ ವ್ಯವಸ್ಥೆ ಚೆನ್ನಾಗಿದೆ. ೫೦ ಕೋಟಿಗೂ ಹೆಚ್ಚು ಭಕ್ತರು ಬಂದಿದ್ದಾರೆ. - ಜಿತೇಂದ್ರ ಸಿಂಗ್, ಕೇಂದ್ರ ಸಚಿವರು
ಕುಟುಂಬ ಸಮೇತರಾಗಿ ಪೂರ್ಣ ಶ್ರದ್ಧಾಭಕ್ತಿಯಿಂದ ಮಹಾಕುಂಭಕ್ಕೆ ಬಂದಿದ್ದೇನೆ. ಈ ಮಹಾ ಸಮಾಗಮದ ಭಾಗವಾಗಬೇಕೆಂಬ ಆಸೆ ಬಹಳ ದಿನಗಳಿಂದಲೂ ಇತ್ತು. - ಚಿರಾಗ್ ಪಾಸ್ವಾನ್, ಕೇಂದ್ರ ಸಚಿವರು
ಇದನ್ನೂ ಓದಿ: ಮಾಘ ಪೂರ್ಣಿಮೆ ಸ್ನಾನದ ನಂತರ ಇಡೀ ರಾತ್ರಿ ಸಮರೋಪಾದಿಯಲ್ಲಿ ನಡೆದ ಸಂಗಮ್ ಘಾಟ್ ಶುಚಿತ್ವ!
ಇದೊಂದು ಅದ್ಭುತ ಅನುಭವ. ಆಧ್ಯಾತ್ಮಿಕ ಕಾರ್ಯಕ್ರಮ ಇದು. ಕೋಟ್ಯಂತರ ಜನ ಯಾವುದೇ ಆಮಂತ್ರಣವಿಲ್ಲದೆ ಕುಂಭಕ್ಕೆ ಬರ್ತಾರೆ. ನಾನು ಚಿಕ್ಕಂದಿನಿಂದಲೂ ಬರ್ತಿದ್ದೇನೆ. - ರಾಜೀವ್ ಶುಕ್ಲಾ, ಕಾಂಗ್ರೆಸ್ ನಾಯಕ
ಮಹಾಕುಂಭ ತುಂಬಾ ದಿವ್ಯ. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಪ್ರಯತ್ನದಿಂದಾಗಿ ಲಕ್ಷಾಂತರ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡ್ತಿದ್ದಾರೆ. - ಅಪರ್ಣಾ ಬಿಷ್ಟ್ ಯಾದವ್, ಭಾಜಪ ನಾಯಕಿ
ಇದನ್ನೂ ಓದಿ: ಕಾಶಿಗೆ ಭೇಟಿ ನೀಡಿದ ಸಿಎಂ ಯೋಗಿ; ಮಕ್ಕಳೊಂದಿಗೆ ಮಗುವಾದ ಆದಿತ್ಯನಾಥ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ