
ಚಂಡೀಗಢ(ಜ.08): ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಪ್ರಕರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಎಸ್ಆರ್ ಲಾಧರ್ ಅವರು ಪಂಜಾಬ್ ಸರ್ಕಾರ ಮತ್ತು ಪೊಲೀಸರ ಕುರಿತಾಗಿ ಕೆಲ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಪಂಜಾಬಿ ವಾಹಿನಿಯೊಂದರೊಂದಿಗಿನ ಸಂಭಾಷಣೆಯಲ್ಲಿ ಪಂಜಾಬ್ ಪೊಲೀಸರೇ ರೈತರನ್ನು ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಕಪ್ಪು ಫಾರ್ಚುನರ್ನಲ್ಲಿ ಪೊಲೀಸರು ಧ್ವಜಗಳನ್ನು ತಂದಿದ್ದರು
ಪಂಜಾಬ್ನ ಖ್ಯಾತ ಆಡಳಿತ ಅಧಿಕಾರಿ (ಈಗ ನಿವೃತ್ತ ಐಎಎಸ್) ಎಸ್ಆರ್ ಲಾಧರ್ ಅವರು ಮೋದಿಯವರ ಸಮಾವೇಶವನ್ನು ವಿಫಲಗೊಳಿಸಲು ಮತ್ತು ರೈತರನ್ನು ಅವರ ಬೆಂಗಾವಲು ಪಡೆಯ ಮುಂದೆ ಕುಳಿತುಕೊಂಡು ಪ್ರತಿಭಟಿಸಿದ್ದು ಎಲ್ಲವೂ ಪಂಜಾಬ್ ಸರ್ಕಾರ ಮತ್ತು ಪೊಲೀಸರು ಪಿತೂರಿ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಂಜಾಬಿ ಚಾನೆಲ್ಗೆ ಹೇಳಿಕೆ ನೀಡಿರುವ ಲಾಧರ್
"ನಾನು ಜವಾಬ್ದಾರಿಯುತ ಅಧಿಕಾರಿಯಾಗಿದ್ದೇನೆ. ನಾನು ಫಿರೋಜ್ಪುರ ಜಿಲ್ಲೆಯ ಡಿಸಿ ಆಗಿದ್ದೇನೆ. ನನ್ನ ಪ್ರತ್ಯಕ್ಷದರ್ಶಿ ಪೊಲೀಸರೇ ರೈತರನ್ನು ಕರೆತಂದು ಕುಳಿತುಕೊಳ್ಳುವಂತೆ ಮಾಡಿದರು. ಸಾವಿರಾರು ರೈತರು ಹೇಗೆ ಪ್ರವೇಶಿಸಿದರು? ಪೊಲೀಸರು ಅವರಿಗೆ ಖುದ್ದು ಕೋಲು ನೀಡಿ ಅವರನ್ನು ಕೂರಿಸಿದರು. ರಸ್ತೆಯಲ್ಲಿ ಕುಳಿತು, ಅವರು ಘೋಷಣೆಗಳನ್ನು ಕೂಗಿದರು, ಇದೊಂದು ಯೋಜಿತ ಷಡ್ಯಂತ್ರವಾಗಿದೆ ಎಂದಿದ್ದಾರೆ
"ಕಪ್ಪು ಪೋಲೀಸ್ ವ್ಯಾನ್ನಲ್ಲಿ (ಫಾರ್ಚುನರ್) ಧ್ವಜಗಳು ಮತ್ತು ಕೋಲುಗಳೊಂದಿಗೆ ಬಂದಿದ್ದವು. ನಂತರ ಹಿಂತಿರುಗಿ ಕಣ್ಮರೆಯಾಯಿತು.
"ಪಂಜಾಬ್ನಲ್ಲಿ ಬಿಜೆಪಿಯ ಸಮಾವೆಶಕ್ಕೆ ಪಂಜಾಬ್ ಸರ್ಕಾರವೇ ಹೊಣೆ. ಇದರಲ್ಲಿ ಶಾಮೀಲಾಗಿರುವ ಪೊಲೀಸ್ ಆಡಳಿತ ಮಂಡಳಿಯವರನ್ನು ತನಿಖೆಗೆ ಒಳಪಡಿಸಬೇಕು" ಎಂದಿದ್ದಾರೆ.
"ಫಿರೋಜ್ಪುರ-ಲೂಧಿಯಾನ ಟೋಲ್ ಪ್ಲಾಜಾದಲ್ಲಿ ನಿಂತಿದ್ದೆ. ಮೋದಿಯವರ ಸಮಾವೇಶದಿಂದ ಸಾವಿರಾರು ಕಾರುಗಳು, ನೂರಾರು ಬಸ್ಗಳು ಹಿಂತಿರುಗುತ್ತಿದ್ದವು. ರೈತರ ಅನುಕಂಪಕ್ಕಾಗಿ ಮೋದಿ ಕೃಷಿ ಕಾಯಿದೆ ಹಿಂತೆಗೆದುಕೊಂಡಿದ್ದಾರೆ. ದೇಶವಾಸಿಗಳ ಬಗ್ಗೆ ಅವರಿಗೆ ಕಾಳಜಿ ಇದೆ. ಆದರೂ ಅವರ ಸಮಾವೇಶಕ್ಕೆ ತೊಂದರೆಯಾಯಿತು, , ವಾತಾವರಣವು ಹದಗೆಟ್ಟಿದ್ದರೆ, ಎಷ್ಟು ಜೀವಗಳನ್ನು ಕಳೆದುಕೊಳ್ಳಬೇಕಿತ್ತು ಎಂದಿದ್ದಾರೆ.
ಏನಿದು ಘಟನೆ?
ಪ್ರಧಾನಿ ಮೋದಿ ಅವರು ಬುಧವಾರ ಬೆಳಗ್ಗೆ 11.30ಕ್ಕೆ ಬಟಿಂಡಾ ವಾಯುನೆಲೆಗೆ ತಲುಪಿದ್ದರು. ಪ್ರತಿಕೂಲ ಹವಾಮಾನದ ಕಾರಣ ಇಲ್ಲಿ 20 ನಿಮಿಷ ಕಾಯಲಾಗಿತ್ತು, ಆದರೂ ವಾಯುಮಾರ್ಗವಾಗಿ ಪ್ರಯಾಣಿಸಲು ಸಾಧ್ಯವಾಗದಾಗ ರಸ್ತೆ ಮೂಲಕ ಪ್ರಯಾಣಿಸುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಿದರು. ರಸ್ತೆ ಪ್ರಯಾಣ ಸುಮಾರು 2 ಗಂಟೆಗಳಿಗಿಂತ ಹೆಚ್ಚು ಸಮಯವಿತ್ತು. ಆದರೆ ಪಂಜಾಬ್ನ ಡಿಜಿಪಿ ಭರವಸೆ ನೀಡಿದಾಗ, ಪ್ರಧಾನಿ ಬೆಂಗಾವಲು ಪಡೆ ಮುಂದೆ ಸಾಗಿತು. ಹುಸೇನಿವಾಲಾದಲ್ಲಿ ಹುತಾತ್ಮ ಸ್ಮಾರಕ ತೆರಳುವ ವೇಳೆ 30 ಕಿ.ಮೀ ಇರುವಾಗ ಅವರ ಬೆಂಗಾವಲು ಮೇಲ್ಸೇತುವೆ ತಲುಪಿತು, ಅಲ್ಲಿ ಪ್ರತಿಭಟನಾಕಾರರು ರಸ್ತೆಯನ್ನು ತಡೆದರು. ಮೋದಿ 15-20 ನಿಮಿಷಗಳ ಕಾಲ ಅಲ್ಲಿ ಸಿಲುಕಿಕೊಂಡರು. ಈ ಮೂಲಕ ಪ್ರಧಾನಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ