
ಅಹಮದಾಬಾದ್(ಸೆ.17): 'ದ್ವೇಷ ಮತ್ತು ನಕಾರಾತ್ಮಕತೆಯಿಂದ ತುಂಬಿರುವ ಕೆಲವು ವ್ಯಕ್ತಿಗಳು ಭಾರತದ ಏಕತೆ ಮತ್ತು ಸಮಗ್ರತೆಯನ್ನು ವಿದೇಶದ ನೆಲದಿಂದ ನಾಶಮಾಡಲು ಹೊರಟಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೂಲಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಭಾರತದಲ್ಲಿನ ವ್ಯವಸ್ಥೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಭುಜ್-ಅಹಮದಾಬಾದ್ ನಡುವೆ ಸಂಚರಿಸುವ ದೇಶದ ಮೊದಲ ನಮೋ ಭಾರತ ರಾಪಿಡ್ ರೈಲಿಗೆ ಹಾಗೂ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಸೇರಿ ಹಲವು ವಂದೇ ಭಾರತ್ ರೈಲುಗಳಿಗೆ ಅಹಮದಾ ಬಾದ್ನಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿ, 'ನನ್ನ 3ನೇ ಅವಧಿಯ 100 ದಿನದಲ್ಲಿ ವಿಪಕ್ಷಗಳು ಅವಮಾನಿಸಿದ್ದವು ಎಂದು ಹೇಳಿದ್ದಾರೆ.
ಇಫ್ತಾರ್ಗೆ ಹೋದರೆ ವಿರೋಧವಿಲ್ಲ, ಪ್ರಧಾನಿ ಗಣಪತಿ ಪೂಜೆಗೆ ಹೋದರೆ ತಕರಾರೇಕೆ?: ಪ್ರಹ್ಲಾದ ಜೋಶಿ
100 ದಿನ ಬೇಕಂತಲೇ ಸುಮ್ಮನಿದ್ದೆ
ನನ್ನ ಮೂರನೇ ಅವಧಿಯ 100 ದಿನ ಗಳ ಆಡಳಿತದಲ್ಲಿ ನನ್ನನ್ನು ವಿಪಕ್ಷಗಳು ಅವಮಾನಿಸಿದವು. ಆದರೆ 100 ದಿನದ ಅಜೆಂಡಾ ಮುಗಿಸೋಣ ಎಂದು ಸುಮ್ಮನಿದ್ದೆ. ನನ್ನ ಮೌನದಿಂದ ಜನರು ಅಚ್ಚರಿಗೊಂಡಿದ್ದರು. ನಾನು ಜನರಿಗಾಗಿ ಬದುಕುತ್ತಿದ್ದೇನೆ. ನಿಮಗಾಗಿ ಹೋರಾಟ, ತ್ಯಾಗ ಮಾಡುತ್ತಿದ್ದೇನೆ. ಹೀಗಾಗಿ ಸುಮ್ಮನಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ