
ನವದೆಹಲಿ[ಮಾ.07]: ಪಿಎಂ ಮೋದಿ ಶನಿವಾರದಂದು ಜನೌಷಧಿ ದಿನದ ಪ್ರಯುಕ್ತ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಜನೌಷಧಿ ಕೇಂದ್ರಗಳ ಸಂಚಾಲಕ ಹಾಗೂ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸಂವಾದದ ನಡುವೆ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ.
ಹೌದು ಸಂವಾದದಲ್ಲಿ ಡೆಹ್ರಾಡೂನ್ ದೀಪಾ ಶಾ ಹೆಸರಿನ ಮಹಿಳಾ ಫಲಾನುಭವಿ ತನ್ನ ಅನುಭವವನ್ನು ಮೋದಿ ಜೊತೆ ಹಂಚಿಕೊಂಡಿದ್ದಾರೆ. ಮೋದಿ ಜೊತೆ ಮಾತನಾಡಿದ ಮಹಿಳೆ '2011 ರಲ್ಲಿ ನನಗೆ ಪಾರ್ಶ್ವವಾಯುಗೀಡಾಗಿದ್ದೆ. ಮಾತನಾಡಲು ಕೂಡಾ ಆಗುತ್ತಿರಲಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಔಷಧಿ ಬೆಲೆ ಕೂಡಾ ದುಬಾರಿಯಾಗಿದ್ದು, ನನ್ನ ಗಂಡ ಕೂಡಾ ಓರ್ವ ವಿಕಲಚೇತನ. ಹೀಗಿರುವಾಗ ನಿಮ್ಮ ಮೂಲಕ ಜನೌಷಧಿ ಕೇಂದ್ರದಿಂದ ಔಷಧಿ ಪಡೆದುಕೊಂಡೆ. ವೈದ್ಯರಂತೂ ನಾನು ಬದುಕುಳಿಯುವುದಿಲ್ಲ ಎಂದೇ ಹೇಳಿದ್ದರು. ಈಗ ನಾನು ಬದುಕುಳಿದಿದ್ದು ಮಾತ್ರವಲ್ಲ, ಔಷಧಿ ಕೂಡಾ ಫಲ ನೀಡಿತು' ಎಂದಿದ್ದಾರೆ. ಬಳಿಕ ಮುಂದುವರೆಸಿ 'ಮೋದೀಜೀ ನಾನು ಭಗವಂತನನ್ನು ನೋಡಿಲ್ಲ. ಆದರೆ ನಿಮ್ಮನ್ನು ಭಗವಂತನ ರೂಪದಲ್ಲಿ ಕಂಡೆ' ಎಂದು ಗದ್ಗದಿತರಾಗಿದ್ದಾರೆ.
ದೀಪಾ ಶಾರವರ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಮಾತುಗಳನ್ನು ಕೇಳುತ್ತಿದ್ದಂತೆಯೇ ತಲೆ ಬಾಗಿ ತಮ್ಮ ಕಣ್ಣೀರು ಮರೆಮಾಚುವ ಯತ್ನ ಮಾಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಈ ಮಹಿಳೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆ ಅಂದರೆ PMBJPಯ ಬಹುದೊಡ್ಡ ಕೊಂಡಿಯಾಗಿದ್ದಾರೆ. ಇದು ದೇಶದ ಪ್ರತಿಯೊಬ್ಬ ವ್ಯಕ್ತಿಗೆ ತಲುಪುವ ಹಾದಿ ಹಾಗೂ ಉತ್ತಮ ಚಿಕಿತ್ಸೆ ತಲುಪಿಸುವ ಸಂಕಲ್ಪವಾಗಿದೆ. ಈವರೆಗೂ ದೇಶದಾದ್ಯಂತ ಸುಮಾರು 6 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ತೆರೆದಿವೆ ಎಂಬುವುದು ಬಹಳ ಖುಷಿ ಕೊಡುವ ವಿಚಾರ ಎಂದಿದ್ದಾರೆ.
ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ