ವಿರೋಧಿಗಳ 'ಡಂಡಾ' ಭಯ ಇನ್ನಿಲ್ಲ: ಮೋದಿ ಹೇಳಿದ್ದರಲ್ಲಿ ಏನುಂಟು, ಏನಿಲ್ಲ?

Suvarna News   | Asianet News
Published : Feb 07, 2020, 03:10 PM ISTUpdated : Feb 07, 2020, 05:11 PM IST
ವಿರೋಧಿಗಳ 'ಡಂಡಾ' ಭಯ ಇನ್ನಿಲ್ಲ: ಮೋದಿ ಹೇಳಿದ್ದರಲ್ಲಿ ಏನುಂಟು, ಏನಿಲ್ಲ?

ಸಾರಾಂಶ

ವಿರೋಧಿಗಳ ಬಡಿಗೆ ಭಯ ಇನ್ನಿಲ್ಲ ಎಂದ ಪ್ರಧಾನಿ ಮೋದಿ| ಇಡೀ ದೇಶ ತಮ್ಮ ಬೆಂಬಲಕ್ಕಿ ನಿಂತಿದೆ ಎಂದ ಪ್ರಧಾನಿ| ಅಸ್ಸಾಂನ ಕೊಕ್ರಾಜಾರ್'ನಲ್ಲಿ ಐತಿಹಾಸಿಕ ಶಾಂತಿ ಒಪ್ಪಂದ ಸಮ್ಮೇಳನ| ಬೋಡೋ ಶಾಂತಿ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದ ಮೋದಿ| 'ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಬೋಡೋ ಶಾಂತಿ ಒಪ್ಪಂದ ಪೂರಕ'| 'ಅಭಿವೃದ್ಧಿಯ ಹೊಸ ಅಧ್ಯಾಯವೊಂದನ್ನು ಈಶಾನ್ಯ ಭಾರತ ಬರೆಯಲಿದೆ'|

ಕೊಕ್ರಾಝರ್(ಫೆ.07): ಇಡೀ ದೇಶದ ಜನತೆ ತಮ್ಮ ಬೆಂಬಲಕ್ಕಿದ್ದು, ವಿರೋಧಿಗಳ 'ಡಂಡಾ' ಭಯ ತಮಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಭಯದಿಂದ ದೂರವಾಗಿರುವುದಾಗಿ ಅವರು ನುಡಿದರು.

ಅಸ್ಸಾಂನ ಕೊಕ್ರಾಝರ್'ನಲ್ಲಿ ನಡೆದ ಐತಿಹಾಸಿಕ ಶಾಂತಿ ಒಪ್ಪಮದ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬೋಡೋ ಶಾಂತಿ ಒಪ್ಪಂದವನ್ನು ಐತಿಹಾಸಿಕ ಎಂದು ಬಣ್ಣಿಸಿದರು.

ಶಸ್ತ್ರಾಸ್ತ್ರಗಳನ್ನು ಬದಿಗಿರಿಸಿ ಮುಖ್ಯಧಾರೆಗೆ ಬಂದ ಬೋಡೋ ಪ್ರತ್ಯೇಕತಾವಾದಿಗಳಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಇಡೀ ದೇಶ ಇಂದು ನಿಮ್ಮೊಂದಿಗೆ ಸಂಭ್ರಮಿಸುತ್ತಿದೆ ಎಂದು ಹೇಳಿದರು.

ಬೋಡೋ ಶಾಂತಿ ಒಪ್ಪಂದದಿಂದಾಗಿ ಸಂಪೂರ್ಣ ಈಶಾನ್ಯ ಭಾರತ ಇದೀಗ ಅಭಿವೃದ್ಧಿ ಎಂಬ ರೈಲಿನ ಇಂಜಿನ್ ಆಗಿ ಪರಿವರ್ತನೆಗೊಂಡಿದೆ. ಅಭಿವೃದ್ಧಿಯ ಹೊಸ ಅಧ್ಯಾಯವೊಂದನ್ನು ಈಶಾನ್ಯ ಭಾರತ ಬರೆಯಲಿದೆ ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು.

ಇಡೀ ದೇಶ ಮಹಾತ್ಮಾ ಗಾಂಧಿಜೀ ಅವರ 150ನೇ ಜನ್ಮ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಬೋಡೋ ಶಾಂತಿ ಒಪ್ಪಂದ ಕಾರ್ಯರೂಪಕ್ಕೆ ಬಂದಿದ್ದು ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಮೋದಿ ನುಡಿದರು.

ಈಶಾನ್ಯ ರಾಜ್ಯಗಳೂ ಸೇರಿದಂತೆ ಇಡೀ ಭಾರತ ತಮ್ಮ ಬೆಂಬಲಕ್ಕೆ ನಿಂತಿದ್ದು, ತಮ್ಮನ್ನು ಬಡಿಗೆಗಳಿಂದ ಬಡಿಯಲು ಹುನ್ನಾರ ನಡೆಸಿರುವ ವಿರೋಧಿಗಳ ಭಯ ತಮಗಿಲ್ಲ ಎಂದು ಪ್ರಧಾನಿ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಚುಚ್ಚಿದರು.

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?