ಮೊಬೈಲ್ ಕಳ್ಳನಿಗೆ ಬುದ್ದಿ ಕಲಿಸಿದ ರೈಲು ಪ್ರಯಾಣಿಕರು: ಏನ್ ಮಾಡಿದ್ರು ನೋಡಿ

Published : Sep 16, 2022, 07:32 AM ISTUpdated : Sep 16, 2022, 03:55 PM IST
ಮೊಬೈಲ್ ಕಳ್ಳನಿಗೆ ಬುದ್ದಿ ಕಲಿಸಿದ ರೈಲು ಪ್ರಯಾಣಿಕರು: ಏನ್ ಮಾಡಿದ್ರು ನೋಡಿ

ಸಾರಾಂಶ

ರೈಲು ಪ್ರಯಾಣಿಕರ ಮೊಬೈಲ್‌ ಕಸಿದು ಪರಾರಿಯಾಗಲು ಯತ್ನಿಸಿದ್ದ ಕಳ್ಳನೊಬ್ಬ ಅಚಾನಕ್ಕಾಗಿ ಪ್ರಯಾಣಿಕರ ಕೈಗೆ ಸಿಲುಕಿ 10 ಕಿ.ಮೀ.ನಷ್ಟು ದೂರ ರೈಲು ಕಿಟಕಿ ಹಿಡಿದು ಜೋತಾಡುತ್ತ ಸಾಗಬೇಕಾದಂತಹ ಫಜೀತಿಗೆ ಸಿಲುಕಿದ ಘಟನೆ ಬಿಹಾರದಲ್ಲಿ ನಡೆದಿದೆ.

ಮೊಬೈಲ್‌ ಕದಿಯಲು ಹೋಗಿ ಕಳ್ಳನ ಫಜೀತಿ: ರೈಲಿನಿಂದ ಕಿಟಕಿಯಿಂದ ಕೈ ಹಾಕಿದವನಿಗೆ ಬುದ್ದಿ ಕಲಿಸಿದ ಜನ

ಪಟನಾ: ರೈಲು ಪ್ರಯಾಣಿಕರ ಮೊಬೈಲ್‌ ಕಸಿದು ಪರಾರಿಯಾಗಲು ಯತ್ನಿಸಿದ್ದ ಕಳ್ಳನೊಬ್ಬ ಅಚಾನಕ್ಕಾಗಿ ಪ್ರಯಾಣಿಕರ ಕೈಗೆ ಸಿಲುಕಿ 10 ಕಿ.ಮೀ.ನಷ್ಟು ದೂರ ರೈಲು ಕಿಟಕಿ ಹಿಡಿದು ಜೋತಾಡುತ್ತ ಸಾಗಬೇಕಾದಂತಹ ಫಜೀತಿಗೆ ಸಿಲುಕಿದ ಘಟನೆ ಬಿಹಾರದಲ್ಲಿ ನಡೆದಿದೆ.

ಸೆ.14ರಂದು ಈ ಘಟನೆ ಬಿಹಾರದಲ್ಲಿ ನಡೆದಿತ್ತು ಎನ್ನಲಾಗಿದೆ. ಬೇಗುಸರಾಯ್‌ಯಿಂದ ಖಗಾರಿಯಾಗೆ ರೈಲು ಪ್ರಯಾಣ ನಡೆಸುತ್ತಿತ್ತು. ಸಾಹೇಬ್‌ ಕಮಲ್‌ ನಿಲ್ದಾಣದ ಬಳಿ ರೈಲು ನಿಂತಾಗ ಕಳ್ಳ, ಪ್ಲಾಟ್‌ಫಾಮ್‌ರ್‍ನಿಂದಲೇ ಕಿಟಕಿಯೊಳಗೆ ಕೈಹಾಕಿ ಪ್ರಯಾಣಿಕರ ಮೊಬೈಲ್‌ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ತಕ್ಷಣ ಕಳ್ಳನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಪ್ರಯಾಣಿಕರು ರೈಲು ಹೊರಟರೂ ಕೈ ಬಿಟ್ಟಿಲ್ಲ. ಇದರಿಂದ ರೈಲಿನ ಹೊರಗೆ ಕಳ್ಳ ನೇತಾಡುವಂತಾಗಿದೆ. ಕಳ್ಳ ಕ್ಷಮಾಪಣೆ ಕೇಳುತ್ತ ಗೋಗರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುಮಾರು 10 ಕಿ.ಮೀ. ಹೀಗೆ ರೈಲಿನಿಂದ ಹೊರಭಾಗದಲ್ಲಿ ನೇತಾಡುತ್ತ ಹೋಗಿದ್ದಾನೆ.


ರೈಲಿನ ಪ್ರಯಾಣಿಕರ ಪ್ರಕಾರ, ರೈಲು ಬೇಗುಸರಾಯ್‌ನ (Begusarai) ಸಾಹೇಬ್‌ಪುರ ಕಮಲ್ ರೈಲು ನಿಲ್ದಾಣದಿಂದ ಹೊರಡುತ್ತಿದ್ದಂತೆ, ಫ್ಲಾಟ್‌ಫಾರ್ಮ್‌ನ ಕೊನೆಯಲ್ಲಿ ನಿಂತಿದ್ದ ಕಳ್ಳನೋರ್ವ ರೈಲಿನ ಕಿಟಕಿಯಿಂದ (window) ರೈಲೊಳಗೆ ಕೈ ಹಾಕಿ ಮೊಬೈಲ್ ಕಸಿಯಲು ಯತ್ನಿಸಿದ್ದಾನೆ. ಈ ವೇಳೆ ರೈಲು ರೈಲಿನ ಒಳಗಿದ್ದ ಪ್ರಯಾಣಿಕರು ಚಾಣಾಕ್ಷತೆ ಮೆರೆದಿದ್ದು, ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ  ಆತ ರೈಲು ಪ್ರಯಾಣಿಕರ ಬಳಿ ತನ್ನನ್ನು ಬಿಡುವಂತೆ ಗೋಗರೆದಿದ್ದಾನೆ. ಆದಾಗ್ಯೂ ಸುಮಾರು 10 ಕಿ.ಮೀಟರ್‌ವರೆಗೆ ಈತನ ಕೈಯನ್ನು ರೈಲು ಪ್ರಯಾಣಿಕರು (Railway Passenger) ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ನಂತರ ಖಗರಿಯಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಈತನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಳ್ಳನನ್ನು ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಸಾಹೇಬ್‌ಪುರ ಕಮಲ್ ಪೊಲೀಸ್ (Sahebpur Kamal station) ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೇಗುಸರಾಯ್ (Begusarai) ನಿವಾಸಿ ಎಂದು ತಿಳಿದು ಬಂದಿದೆ.

ಬೇಗುಸರಾಯ್‌ ರೈಲು ಮಾರ್ಗಗಳು ಕಳ್ಳರ ಸ್ವರ್ಗ ಎನಿಸಿದೆ. ಕಳೆದ ಜೂನ್‌ನಲ್ಲಿ ಪಾಟ್ನಾ ದಿಂದ ಬೇಗುಸರೈಗೆ (Begusarai) ಸಂಪರ್ಕ ಕಲ್ಪಿಸುವ ರಾಜೇಂದ್ರ ಸೇತು ರೈಲು ಸೇತುವೆಯಲ್ಲಿ (Rajendra Setu bridge) ಕಳ್ಳರು ರೈಲು ಪ್ರಯಾಣಿಕರ ಮೊಬೈಲ್‌  ದರೋಡೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ಕತಿಹಾರ್‌ನಿಂದ (Katihar) ಪಾಟ್ನಾಗೆ ಪ್ರಯಾಣಿಸುವ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನ (Inter City Express train)  ತೆರೆದ ಗೇಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಸಮೀರ್ ಕುಮಾರ್ (Sameer Kumar) ಎಂಬ ವ್ಯಕ್ತಿ ತನ್ನ ಫೋನ್‌ನಿಂದ ಗಂಗಾ ನದಿಯ (Ganga River) ವೀಡಿಯೊ ರೆಕಾರ್ಡ್ ಮಾಡುವುದನ್ನು ನೋಡಬಹುದು. ಅವನು ರೈಲಿನ ಕೋಚ್‌ನ ಅಂಚಿನಲ್ಲಿ ಕುಳಿತು ವೀಕ್ಷಣೆಯನ್ನು ರೆಕಾರ್ಡ್ ಮಾಡುವಲ್ಲಿ ನಿರತನಾಗಿದ್ದಾಗ, ಸೇತುವೆಯಿಂದ ನೇತಾಡುತ್ತಿರುವ ದರೋಡೆಕೋರ ಸಮೀರ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳುತ್ತಾನೆ. 

ದರೋಡೆಕೋರ ಸಮೀರ್‌ನ ಕೈಯಿಂದ ಮೊಬೈಲ್ ಫೋನ್ ಅನ್ನು ವೇಗವಾಗಿ ಕಸಿದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೆಲವು ಸೆಕೆಂಡುಗಳ ಕಾಲ, ಸಮೀರ್‌ಗೆ ಏನಾಯಿತು ಎಂಬುದು ಸಹ ತಿಳಿದಿರಲಿಲ್ಲ ಏಕೆಂದರೆ ಎಲ್ಲವೂ ತುಂಬಾ ವೇಗವಾಗಿ ಸಂಭವಿಸಿತು. ನಂತರ ಅವನು ನಿಂತುಕೊಂಡು ವೀಡಿಯೊವನ್ನು ಚಿತ್ರೀಕರಿಸುತ್ತಿದ್ದ ತನ್ನ ಸ್ನೇಹಿತನಿಗೆ ಹೇಳಿದ್ದಾನೆ. ಈ ಘಟನೆಯನ್ನು ರೈಲಿನಲ್ಲಿದ್ದ ಇನ್ಯಾರೋ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಹಾಗಂತ ಇದೇನು ಇದು ರಾಜೇಂದ್ರ ಸೇತು ಸೇತುವೆಯಲ್ಲಿ ನಡೆಯುವ ಅಪರೂಪದ ಘಟನೆಯೇನಲ್ಲ. ಅನೇಕ ದರೋಡೆಕೋರರು ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸೇತುವೆಯಿಂದ ನೇತಾಡುತ್ತಾರೆ. ಅವರು ಸೇತುವೆಗೆ ತಮ್ಮನ್ನು ಕಟ್ಟಿಕೊಳ್ಳಲು ಹಗ್ಗವನ್ನು ಬಳಸುತ್ತಾರೆ ಮತ್ತು ಅಂಚಿನಲ್ಲಿ ತಮ್ಮ ಪಾದಗಳನ್ನು ಸಮತೋಲನಗೊಳಿಸುವ ಮೂಲಕ ರೈಲಿನಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಇದೇ ಸೇತುವೆ ಮೇಲೆ ಪ್ರತಿದಿನ ಹತ್ತಾರು ಇಂತಹ ಘಟನೆಗಳು ನಡೆಯುತ್ತಿವೆ. ಸೇತುವೆಯ ಬೇಲಿಗಳಿಗೆ ನೇತಾಡುವ ದರೋಡೆಕೋರರು ಕ್ಷಣಾರ್ಧದಲ್ಲಿ ಪ್ರಯಾಣಿಕರಿಂದ ಫೋನ್ ಕಸಿದುಕೊಳ್ಳುತ್ತಾರೆ ಮತ್ತು ರೈಲು ಚಲಿಸುತ್ತಿರುವುದರಿಂದಾಗಿ ಪ್ರಯಾಣಿಕರಿಗೆ ಏನನ್ನೂ ಮಾಡಲಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು