
ನವದೆಹಲಿ(ಜು.13): ಇದೇ ತಿಂಗಳ 19ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ವೇಳೆ ಕೋವಿಡ್ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ.
ಸೋಮವಾರ ಸಂಸತ್ತಿನ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ ಅವರು, ‘ಈವರೆಗೆ ಸಂಸತ್ತಿನ 323 ಸಂಸದರು ಲಸಿಕೆ ಪಡೆದಿದ್ದಾರೆ. ಇನ್ನು 23 ಸಂಸದರು ಕೆಲ ವೈದ್ಯಕೀಯ ಕಾರಣಗಳಿಗಾಗಿ ಮೊದಲ ಡೋಸ್ ಪಡೆಯಲು ಸಾಧ್ಯವಾಗಿಲ್ಲ. ಈವರೆಗೆ ಕೊರೋನಾ ಲಸಿಕೆ ಪಡೆಯದವರು ಕಲಾಪ ನಡೆಯುವ ವೇಳೆ ಸಂಸತ್ತಿನ ಆವರಣ ಪ್ರವೇಶಕ್ಕೂ ಮುನ್ನ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ’ ಎಂದು ಹೇಳಿದರು.
ಇನ್ನು ಸಂಸತ್ತಿನ ಉಭಯ ಕಲಾಪಗಳು ಬೆಳಗ್ಗೆ 11 ಗಂಟೆಯಿಂದ ಒಮ್ಮೆಲೇ ಆರಂಭವಾಗಲಿವೆ. ಜು.19ಕ್ಕೆ ಆರಂಭವಾಗಿ ಆ.13ರಂದು ಕಲಾಪಗಳು ಮುಕ್ತಾಯವಾಗಲಿವೆ.
ಕೊರೋನಾ ಕಾರಣಕ್ಕಾಗಿ ಕಳೆದ ವರ್ಷದ ಕಲಾಪವನ್ನು ರದ್ದುಗೊಳಿಸಲಾಗಿತ್ತು. ಅದಕ್ಕೂ ಮುಂಚೆ 3 ಕಲಾಪಗಳ ಕಾಲಾವಧಿಯನ್ನು ಮಿತಿಗೊಳಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ