ಶಿರೋಮಣಿ ಅಕಾಲಿದಳದ ನಂತರ ಮತ್ತೊಂದು ಪಕ್ಷ  NDAಗೆ ಗುಡ್ ಬೈ

Published : Dec 27, 2020, 04:40 PM IST
ಶಿರೋಮಣಿ ಅಕಾಲಿದಳದ ನಂತರ ಮತ್ತೊಂದು ಪಕ್ಷ  NDAಗೆ ಗುಡ್ ಬೈ

ಸಾರಾಂಶ

ಎನ್‌ಡಿಎಗೆ ಮತ್ತೊಂದು ಶಾಕ್/ ಕೃಷಿ ಮಸೂದೆ ಬಿಲ್ ಗಳನ್ನು ವಿರೋಧಿಸಿ ಮತ್ತೊಂದು ದೋಸ್ತಿ ಪಕ್ಷ ಹೊರಕ್ಕೆ/ ಎನ್ ಡಿಎಯಿಂದ ಹೊರಬಂದ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ (ಆರ್‌ಎಲ್‌ಪಿ) / ಕೇಂದ್ರ ಸರ್ಕಾರದ ಮೂರು ಬಿಲ್ ಗಳಿಗೆ ವಿರೋಧ

ಜೈಪುರ(ಡಿ. 27) ಕೃಷಿ ಮಸೂದೆ, ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಎಪಿಎಂಸಿ ಬಿಲ್ ವಿರೋಧಿಸಿ ಎನ್‌ಡಿಎ ಯಿಂದ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ (ಆರ್‌ಎಲ್‌ಪಿ) ಹೊರಬರುವ ನಿರ್ಧಾರ ಮಾಡಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಗೆ ಬರುತ್ತೇವೆ ಎಂದು ಆರ್‌ಎಲ್‌ಪಿ ಅಧ್ಯಕ್ಷ ಹನುಮಾನ್ ಬೆನಿವಾಲ್ ಖಚಿತಪಡಿಸಿದ್ದಾರೆ. ಆದರೆ ನಾವು ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹನುಮಾನ್ ಬೆನಿವಾಲ್  ಮಾತನಾಡಿ, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದೇವು. ಪ್ರತಿಭಟನೆಯನ್ನು ನಡೆಸಿದ್ದೇವು. ಆದರೆ ಕೇಂದ್ರ ಸರ್ಕಾರ ಯಾವುಕ್ಕೂ ಬೆಲೆ ನೀಡಿಲ್ಲ. ಹಾಗಾಗಿ ಹೊರಕ್ಕೆ ಬರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿಗೆ ಮೋದಿ ಅದ್ಭುತ ಠಕ್ಕರ್

ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಉದ್ದೇಶೀಸಿ ಮಾತನಾಡಿ ಬೇಕಾದರೆ ನಾನು ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಡಿಸೆಂಬರ್ 19 ರಂದು, ಬೆನಿವಾಲ್ ಸಂಸದೀಯ ಸಮಿತಿಗಳಾದ ಕೈಗಾರಿಕೆಗಳ ಸ್ಥಾಯಿ ಸಮಿತಿ, ಪಿಟಿಷನ್ ಸಮಿತಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಮಾಲೋಚನಾ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದರು.

ಎನ್‌ಡಿಎ ಯ ಮತ್ತೊಂದು ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಹ ಕೃಷಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿ ಒಕ್ಕೂಟದಿಂದ ಹೊರಕ್ಕೆ ಬಂದಿತ್ತು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !