
ನವದೆಹಲಿ(ಅ.13): 2016ರಲ್ಲಿ ಕೇರಳದ ನಿಲಂಬೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಮಾವೋವಾದಿಗಳ ಶಿಬಿರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(National Investigation Force)ಮಂಗಳವಾರ ಕರ್ನಾಟಕ(Karnataka), ತಮಿಳುನಾಡು(Tamil Nadu) ಮತ್ತು ಕೇರಳದ(Kerala) 20 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಚಿಕ್ಕಮಗಳೂರು(Chikkamagaluru), ಉಡುಪಿ(Udupi) ಮತ್ತು ಶಿವಮೊಗ್ಗದ(Shivamogga) 5 ಸ್ಥಳಗಳು, ತಮಿಳುನಾಡಿನ 12 ಸ್ಥಳಗಳು ಮತ್ತು ಕೇರಳದ 3 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಈ ಸ್ಥಳಗಳಿಂದ ಮೊಬೈಲ್ ಫೋನ್ಗಳು, ಡಿಜಿಟಲ್ ಸ್ಟೋರೇಜ್ ಸಾಧನಗಳು, ಸಿಮ್ ಕಾರ್ಡ್ಗಳು, ಪುಸ್ತಕಗಳು ಸೇರಿದಂತೆ ಇನ್ನಿತರ ದಾಖಲೆಗಳು, ಭಿತ್ತಿಪತ್ರಗಳು ಹಾಗೂ ಎಡಪಂಥೀಯರ ಪ್ರಣಾಳಿಕೆಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾಜಿ ಪೊಲೀಸ್ ಅಧಿಕಾರಿಯೇ ಮಾಸ್ಟರ್ ಮೈಂಡ್.. ಅಂಬಾನಿಯನ್ನೇ ದೋಚುವ ರೋಚಕ ಪ್ಲಾನ್!
ಸಿಪಿಐ(CPI) (ಮಾವೋವಾದಿ) ನಿಷೇಧಿತ ಸಂಘಟನೆ ಸದಸ್ಯರು 2016ರ ಸೆಪ್ಟೆಂಬರ್ನಲ್ಲಿ ನಿಲಂಬೂರು ಅರಣ್ಯದಲ್ಲಿ(Forest) ಶಸ್ತ್ರಾಸ್ತ್ರಗಳ ತರಬೇತಿ ಹಾಗೂ ಇನ್ನಿತರ ತರಬೇತಿ ಶಿಬಿರವನ್ನು ನಡೆಸುತ್ತಿದ್ದರು. ಇದರಲ್ಲಿ ಐವರನ್ನು ಬಂಧಿಸಲಾಗಿದ್ದು, ಇನ್ನೂ 20 ಜನರಿಗೆ ಶೋಧ ನಡೆದಿದೆ. ಈ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ.
ಅಲ್ಲದೆ ದೇಶದ ಐಕ್ಯತೆಗೆ ಧಕ್ಕೆ ಮತ್ತು ಭಾರತದ(India) ಭದ್ರತೆಗೆ ಕುಂದು ಉಂಟು ಮಾಡುವ ದೇಶದ್ರೋಹಿ ಚಟುವಟಿಕೆಗಳಲ್ಲೂ ಈ ಸಂಘಟನೆ ಸದಸ್ಯರು ತೊಡಗಿಕೊಂಡಿದ್ದರು ಎಂಬ ಆರೋಪವಿದೆ. ಈ ಪ್ರಕರಣದ ಬಗ್ಗೆ 2017ರಿಂದ ತನಿಖೆ ನಡೆಸುತ್ತಿದ್ದ ಕೇರಳ ಪೊಲೀಸರು, 2021ರ ಮೇ 18ರಂದು ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತು. ಆ ಬಳಿಕ 2021ರ ಆ.20ರಂದು ಈ ಪ್ರಕರಣದ ತನಿಖೆಯನ್ನು ಎನ್ಐಎ(NIA) ವಹಿಸಿಕೊಂಡಿತ್ತು. ಅಲ್ಲದೆ ಈ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಸಿಪಿಐನ 20 ಸದಸ್ಯರ ವಿರುದ್ಧ ಎನ್ಐಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ