
ನವದೆಹಲಿ(ಸೆ.10): ಹಾಸನದ ಪೆನ್ಡ್ರೈವ್ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಾಸವಿದ್ದ ಮನೆಯ ಸಹವಾಸ ನಮಗೆ ಬೇಡವೇ ಬೇಡ ಎಂದು ನೂತನ ಸಂಸದರು ಲೋಕಸಭಾ ಹೌಸ್ ಕಮಿಟಿಗೆ ಪತ್ರ ಬರೆದಿದ್ದಾರೆ.
ನಗರದಲ್ಲಿ ಹಾಲಿ ಸಂಸದರಿಗೆ ಮನೆ ನೀಡುವ ಪ್ರಕ್ರಿಯಿಗೆ ಲೋಕಸಭಾ ಹೌಸ್ ಕಮಿಟಿ ಚಾಲನೆ ನೀಡಿದ್ದು, ಈ ಹಿಂದೆ ಪ್ರಜ್ವಲ್ ರೇವಣ್ಣ ವಾಸಿಸುತ್ತಿದ್ದ ದೆಹಲಿಯ ಬಿ.ಡಿ.ಪಂತ್ ಮಾರ್ಗ್ ಸರಸ್ವತಿ ಅಪಾರ್ಟ್ಮೆಂಟ್ನ 9ನೇ ಫ್ಲೋರ್ನಲ್ಲಿರುವ ಮನೆಗೆ ಹೋಗಲು ಸಂಸದರು ಇಷ್ಟಪಡುತ್ತಿಲ್ಲ. ಈ ಬಗ್ಗೆ ಕರ್ನಾಟಕದ ಅಷ್ಟೇ ಅಲ್ಲದೆ ಉತ್ತರ ಪ್ರದೇಶದ ಹಲವು ಸಂಸದರು ಕಮಿಟಿಗೆ ಪತ್ರ ಬರೆದಿದ್ದು, ಆ ಮನೆಯ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಕೆಲ ಸಂಸದರು ಒಪ್ಪಿದರೂ ಅವರ ಕುಟುಂಬದ ಸದಸ್ಯರು ಪ್ರಜ್ವಲ್ ಇದ್ದ ಮನೆಗೆ ಹೋಗಲು ಸುತಾರಾಂ ಒಪ್ಪುತ್ತಿಲ್ಲ.
ಬಾತ್ ರೂಂಗೆ ಹೋಗಬೇಕು ಅಂದರೂ ಬಿಡದೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇಪ್..!
ವಿನ್ಯಾಸ ಮಾಡಿಸಿದ್ದ ಪ್ರಜ್ವಲ್:
ಕಳೆದ 4 ವರ್ಷದ ಹಿಂದಷ್ಟೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಪ್ರಜ್ವಲ್ ರೇವಣ್ಣ ತಮಗಾಗಿ ಮನೆ ವಿನ್ಯಾಸ ಮಾಡಿಸಿಕೊಂಡಿದ್ದರು. ಸ್ವತಃ ತಾಯಿ ಭವಾನಿ ಹಾಗೂ ತಂದೆ ರೇವಣ್ಣ ಉಸ್ತುವಾರಿಯಲ್ಲಿ ಮನೆಗೆಲ್ಲಾ ಅಲಂಕಾರ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ