
ನಾಗ್ಪುರ (ಸೆ.8): ಚಹಾ ವಿರಾಮಕ್ಕೆ ಹೋಗಿ ನಾಲ್ಕು ಗಂಟೆಗಳ ಕಾಲ ಆಪರೇಷನ್ ಥಿಯೇಟರ್ನಲ್ಲಿ ರೋಗಿ ಇರುವುದನ್ನು ಮರೆತು ಬಿಟ್ಟು ಹೋದ ಆರೋಪದ ಮೇಲೆ ಮಹಾರಾಷ್ಟ್ರದ ವೈದ್ಯರೊಬ್ಬರು ತನಿಖೆ ಎದುರಿಸುತ್ತಿದ್ದಾರೆ. ಒಂದು ಕಪ್ ಟೀಗಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ (ವ್ಯಾಸೆಕ್ಟಮಿ) ಯನ್ನು ಮಧ್ಯದಲ್ಲಿಯೇ ಬಿಟ್ಟು ಹೋದರು ಎಂದು ಆರೋಪಿಸಲಾಗಿದೆ.
ನಾಗ್ಪುರದಿಂದ 40 ಕಿಮೀ ದೂರದಲ್ಲಿರುವ ಖಾಟ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಡಾ.ಭಾಲವಿ ಅವರು ಏಳು ಟ್ಯೂಬೆಕ್ಟಮಿಗಳು ಮತ್ತು ಒಂದು ಸಂತಾನಹರಣ ಸೇರಿದಂತೆ ಎಂಟು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿತ್ತು.
ನಷ್ಟದ ಹಾದಿ, 26,936 ಕೋಟಿ ರೂ ಗೃಹೋಪಯೋಗಿ ಕಂಪನಿ ಮಾರಾಟಕ್ಕೆ ಮುಂದಾದ ಟಾಟಾ ಗ್ರೂಪ್!
ನಾಲ್ಕು ಬಾರಿ ಆಪರೇಷನ್ ಮಾಡಿದ ನಂತರ ಡಾ.ಭಾಲವಿ ಅಸ್ವಸ್ಥರಾಗಿದ್ದರು. ಹೀಗಾಗಿ ಚಹಾವನ್ನು ಕೇಳಿದರು. ಆದರೆ ಚಹಾ ಸಿಗದ ಕಾರಣ ಕೋಪಗೊಂಡು ಆಪರೇಷನ್ ಥಿಯೇಟರ್ನಿಂದ ಹೊರಬಂದರು ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಘಟನೆ ಸಂಭವಿಸಿದಾಗ, ನಾಲ್ವರು ಮಹಿಳೆಯರು ಆಳವಾದ ನಿದ್ರೆಯಲ್ಲಿದ್ದರು, ಏಕೆಂದರೆ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಅವರಿಗೆ ಅನಸ್ತೇಶಿಯಾ ನೀಡಲಾಗಿತ್ತು.
ಬಳಿಕ ಮಹಿಳೆಯ ಕುಟುಂಬಸ್ಥರು ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ನಿರ್ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು. ಅದಾದ ಬಳಿಕ ಆಸ್ಪತ್ರೆ ಆಡಳಿತಾಧಿಕಾರಿ ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಡಾ.ಭಾಲವಿ ಅವರು ನಾಲ್ಕು ಗಂಟೆಗಳ ನಂತರ ಹಿಂತಿರುಗಿದರು ಎಂದು ತಿಳಿದುಬಂದಿದೆ.
ಅಪ್ಪ ಏಷ್ಯಾದ ಶ್ರೀಮಂತ, ಆದ್ರೆ ಮಗಳು ಇಶಾ ಅಂಬಾನಿ ಕಂಪೆನಿ ಬರೋಬ್ಬರಿ 1,800 ಕೋಟಿ ನಷ್ಟದಲ್ಲಿ!
ಘಟನೆ ಕುರಿತು ಮಾತನಾಡಿದ ನಾಗ್ಪುರ ಜಿಲ್ಲಾ ಪರಿಷತ್ ನ ಸಿಇಒ ಸೌಮ್ಯ ಶರ್ಮಾ, ಘಟನೆಯ ಕುರಿತು ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿ ಆಧರಿಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಜಯ್ ದಾವ್ಲೆ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಇದರ ತನಿಖೆ ನಡೆಸಲು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಲಾಗಿದೆ ಎಂದಿದ್ದಾರೆ. ಸಿಬ್ಬಂದಿ, ರೋಗಿಗಳು ಮತ್ತು ಇತರ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ ನಂತರ, ನಿಗದಿಪಡಿಸಿದಂತೆ ಎಲ್ಲಾ ಎಂಟು ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಯ್ತು ಎಂದು ತಿಳಿದುಬಂದಿದೆ.
ಕುಟುಂಬ ಯೋಜನಾ ಕಾರ್ಯಾಚರಣೆ ಎಂದೂ ಕರೆಯಲ್ಪಡುವ ಶಾಶ್ವತ ಜನನ ನಿಯಂತ್ರಣ ಪ್ರಕ್ರಿಯೆಯು ಸಾಮಾನ್ಯವಾಗಿ ಅರಿವಳಿಕೆ ಮತ್ತು ಇತರ ಔಷಧಗಳು ಒಳಗೊಂಡಂತೆ ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಾಲ್ವರು ಮಹಿಳೆಯರು ತಮ್ಮ ಯೋಜಿತ ಶಸ್ತ್ರಚಿಕಿತ್ಸೆಗೆ ಮುಂಚಿತವಾಗಿ ಗಾಢ ನಿದ್ರೆಯಲ್ಲಿದ್ದರು ಎಂದು ಹೇಳಲಾಗುತ್ತದೆ, ಆಗ ಡಾ.ಭಾಲವಿ ಒಂದು ಕಪ್ ಚಹಾಕ್ಕಾಗಿ OT ಯಿಂದ ಹೊರಬಂದರು ಎಂದು ಕೂಡ ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ