
ಅಹಮದಾಬಾದ್[ಮಾ.05]: ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಹಿಂಸಾಚಾರದಲ್ಲಿ 48 ಮಂದಿ ಬಲಿಯಾಗಿದ್ದರು. ಆಪತ್ತಿನ ಈ ಸಮಯದಲ್ಲಿ ಮುಸ್ಲಿ ಹಾಗೂ ಹಿಂದೂ ಸಹೋದರರು ಪರಸ್ಪರ ಸಹಾಯಕ್ಕೆ ಧಾವಿಸಿದ್ದರು. ಹೀಗಾಗುವುದು ಸಹಜ ಯಾಕೆಂದರೆ ಭಾರತ ಈ ಹಿಂದಿನಿಂದಲೂ ಜಾತ್ಯಾತೀತ ಹಾಗೂ ಏಕತೆಗೆ ಹೆಸರುವಾಸಿಯಾಗಿದೆ. ಸದ್ಯ ಗುಜರಾತ್ ನಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಸಂಸ್ಕೃತೆಗೆ ಸಾಕ್ಷಿಯಾಗಿದ್ದಾರೆ.
ANI ಈ ಸಂಬಂಧ ಸುದ್ದಿ ಪ್ರಕಟಿಸಿದೆ. ಮೂಲತಃ ತಮಿಳುನಾಡಿನ ಪರಿಪಟ್ಟಿಯವರಾದ ಅಬ್ದುಲ್ ಖುದಾ ಮೊಹಮ್ಮದ್ ಹನೀಫ್ ಶೇಖ್ ಸದ್ಯ ಗುಜರಾತ್ ನ ಬರೂಚ್ ಜಿಲ್ಲೆಯ ಪೀರಾಮನ್ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಪರಿಪಟ್ಟಿಯಲ್ಲಿ ದೇಗುಲ ನಿರ್ಮಿಸಲು ಈವರೆಗೆ ಒಟ್ಟು 3 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ.
ಇನ್ನು ಶೇಖ್ ಇಂತಹ ಹರಜ್ಜೆ ಇರಿಸಲೂ ಒಂದು ಕಾರಣವಿದೆ. ಇವರ ಜಳ್ಳಿಯ ವಿಜಯ್ ಕುಮಾರ್ ಎಂಬವರು ಕೇಳಿದ್ದ ಸಹಾಯಕ್ಕೆ ಪ್ರತಿಯಾಗಿ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಸಂಬಂದ ಪ್ರತಿಕ್ರಿಯಿಸಿರುವ ಶೇಖ್ 'ಅವರು ನನಗೆ 4 ತಿಂಗಳ ಹಿಂದೆ ತಿಳಿಸಿದ್ದರು ಹಾಗೂ 10 ದಿನದ ಹಿಂದೆ ನನ್ನ ಬಳಿ ಬಂದಿದ್ದರು. ವಾಣಿಯಿಂದ ಹಿಡಿದು ಮೆಹಸಾಣಾವರೆಗೆ, ನನ್ನ ಹಳ್ಳಿಯಲ್ಲೂ ಹಲವಾರು ಮದ್ರಾಸಿಗಳು ಇದ್ದಾರೆ. ನಾನು ಅವರೆಲ್ಲರ ಬಳಿ ಖುದ್ದಾಗಿ ತೆರಳಿ ಈವರೆಗೂ ಒಟ್ಟು 3 ಲಕ್ಷ ರೂಪಾಯಿ ಸಂಗ್ರಹಿಸಿದ್ದೇನೆ' ಎಂದಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ವಿಜಯ್ ಕುಮಾರ್, ನಾನು ನನ್ನ ಗೆಳೆಯನೊಂದಿಗೆ 10 ದಿನಗಳವರೆಗೆ ಗುಜರಾತ್ ನಲ್ಲಿ ಉಳಿದುಕೊಂಡೆ ಹಾಗೂ 3 ಲಕ್ಷ ಸಂಗ್ರಹಿಸಿದೆ. ನಮ್ಮ ಹಳ್ಳಿಯಲ್ಲಿ ಹಿಂದೂ ಮುಸಲ್ಮಾನರ ನಡುವೆ ಇರುವಷ್ಟು ಆತ್ಮೀಯತೆ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ನಾವೆಲ್ಲರೂ ಸ್ನೇಹಿತರಂತಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ