ಚಾಯ್‌ವಾಲಾಗೆ ₹100 ಕೋಟಿ ಕೋವಿಡ್ ಸೆಂಟರ್‌ ಗುತ್ತಿಗೆ: ಮಹಾ ಸರ್ಕಾರ ವಿರುದ್ಧ ಕಿರೀಟ್ ಸೋಮಯ್ಯ ಆರೋಪ!

Published : Feb 12, 2022, 04:53 PM ISTUpdated : Feb 12, 2022, 04:56 PM IST
ಚಾಯ್‌ವಾಲಾಗೆ ₹100 ಕೋಟಿ ಕೋವಿಡ್ ಸೆಂಟರ್‌ ಗುತ್ತಿಗೆ: ಮಹಾ ಸರ್ಕಾರ ವಿರುದ್ಧ ಕಿರೀಟ್ ಸೋಮಯ್ಯ ಆರೋಪ!

ಸಾರಾಂಶ

100 ಕೋಟಿ ಮೌಲ್ಯದ ಟೆಂಡರನ್ನು ಚಾಯ್‌ವಾಲಾ ಸಂಸ್ಥೆಗೆ ನೀಡಲಾಗಿದೆ ಎಂದು ಕಿರೀಟ್ ಸೌಮಯ್ಯ ಮಹಾರಾಷ್ಟ್ರ ಸರ್ಕಾರವನ್ನು ಮೆಲೆ ಆರೋಪ ಮಾಡಿದ್ದಾರೆ. ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ಚಾಯ್ವಾಲಾ ವ್ಯಕ್ತಿ ಈ ಸಂಸ್ಥೆಯ ದೊಡ್ಡ ಪಾಲುದಾರರಾಗಿದ್ದಾರೆ.

ಮುಂಬೈ (ಫೆ. 12): ಬಿಜೆಪಿಯ (BJP) ಹಿರಿಯ ನಾಯಕ ಮತ್ತು ಮಾಜಿ ಸಂಸದ ಕಿರೀಟ್ ಸೋಮಯ್ಯ (Kirit Somaiya) ಮಹಾರಾಷ್ಟ್ರ ಸರ್ಕಾರ (Maharashtra Government) ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಉದ್ಧವ್ ಸರ್ಕಾರವು 100 ಕೋಟಿ ಕೋವಿಡ್ ಕೇಂದ್ರಗಳ ಗುತ್ತಿಗೆಯನ್ನು ಚಾಯ್ವಾಲಾಗೆ ನೀಡಿದೆ ಎಂದು ಸೌಮ್ಯಾ ಆರೋಪಿಸಿದ್ದಾರೆ.ಠಾಕ್ರೆ ಸರ್ಕಾರವು ಗುತ್ತಿಗೆ ನೀಡಿದ ಕಂಪನಿ ಕಪ್ಪು ಪಟ್ಟಿಗೆ ಸೇರಿದೆ ಎಂದು ಆರೋಪಿಸಲಾಗಿದೆ. ಆದರೆ ಸರ್ಕಾರದಲ್ಲಿ ಖ್ಯಾತಿ ಮತ್ತು ಮನ್ನಣೆಯ ಆಧಾರದ ಮೇಲೆ ಈ ಗುತ್ತಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಿರೀಟ್ ಸೌಮಯ್ಯ  ಮಾಡಿದ ಆರೋಪವೇನು?: 100 ಕೋಟಿ ಮೌಲ್ಯದ ಟೆಂಡರನ್ನು  ಚಾಯ್‌ವಾಲಾ ಸಂಸ್ಥೆಗೆ ನೀಡಲಾಗಿದೆ ಎಂದು ಕಿರೀಟ್ ಸೌಮಯ್ಯ ಮಹಾರಾಷ್ಟ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ಚಾಯ್ವಾಲಾ ವ್ಯಕ್ತಿ ಈ ಸಂಸ್ಥೆಯ ದೊಡ್ಡ ಪಾಲುದಾರರಾಗಿದ್ದಾರೆ. 

ಇದನ್ನೂ ಓದಿ: Maharashtra BJP MLAs Case: ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್

ಸರ್ಕಾರದ ನೆರವಿನಿಂದ ಅವರು ಈ ಟೆಂಡರ್ ಪಡೆದಿದ್ದಾರೆ. ಉದ್ಧವ್ ಸರ್ಕಾರವು ಲೈಫ್‌ಲೈನ್ ಆಸ್ಪತ್ರೆ ನಿರ್ವಹಣಾ ಸೇವೆಗಳಿಗೆ ಟೆಂಡರ್ ನೀಡಿದೆ ಎಂದು ಕಿರಿಟ್ ಸೌಮಯ್ಯ ಹೇಳಿದರು. ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ 100 ಕೋಟಿ ರೂ.ಗಳ ಈ ಟೆಂಡರ್ ನೀಡಲಾಗಿದೆ. ಈ ಕಂಪನಿಯ ಪ್ರಮುಖ ಪಾಲುದಾರ ಚಾಯ್ವಾಲಾ ಆಗಿದ್ದಾರೆ.

ಚಾಯ್‌ವಾಲಾ ಯಾರು?: ಲೈಫ್‌ಲೈನ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಸರ್ವಿಸಸ್‌ನ ಪ್ರಮುಖ ಪಾಲುದಾರ ರಾಜೀವ್ ಸಾಳುಂಖೆ ಎಂದು ಕಿರಿತ್ ಸೌಮಯ್ಯ ಹೇಳಿದ್ದಾರೆ. ರಾಜೀವ್ ಸಾಳುಂಕೆ ಸಹ್ಯಾದ್ರಿ ರಿಫ್ರೆಶ್‌ಮೆಂಟ್ಸ್ ಮಾಲೀಕರಾಗಿದ್ದಾರೆ.

ಇದನ್ನೂ ಓದಿ: ಮುಂಬೈ ಪಾರ್ಕ್‌ಗೆ ಟಿಪ್ಪು ಸುಲ್ತಾನ್ ಹೆಸರು: ಬಿಜೆಪಿ, ವಿಎಚ್‌ಪಿ ತೀವ್ರ ವಿರೋಧ!

ರಾಜೀವ್ ಸಾಳುಂಕೆ ಅವರಿಗೆ ಟೆಂಡರ್ ಏಕೆ ನೀಡಲಾಗಿದೆ?: ಚಾಯ್‌ವಾಲಾ ರಾಜೀವ್ ಸಾಳುಂಕೆ ಅವರ ಪಾಲುದಾರ ಸಂಜಯ್ ರಾವುತ್ ಎಂಬ ಕಾರಣಕ್ಕೆ ಈ ಟೆಂಡರ್ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಕಿರಿತ್ ಸೌಮಯ್ಯ ಆರೋಪಿಸಿದ್ದಾರೆ. ಸಂಜಯ್ ರಾವತ್ ಶಿವಸೇನೆಯ ಪ್ರಬಲ ನಾಯಕ. ಅವರ ಆದೇಶದ ಮೇರೆಗೆ ಈ ಟೆಂಡರನ್ನು ರಾಜ್ಯ ಸರ್ಕಾರ ನಿರ್ವಹಿಸಿದೆ.

ಈ ಎಲ್ಲಾ ಟೆಂಡರ್‌ಗಳನ್ನು ಸಂಜಯ್ ರಾವುತ್ (Sanjay Raut) ಮೂಲಕ ನಿರ್ವಹಿಸಲಾಗಿದೆ ಎಂದು ಬಿಜೆಪಿ ಮುಖಂಡ ಕಿರೀಟ್ ಸೌಮ್ಯಯ್ಯ ಹೇಳಿದ್ದಾರೆ. ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಗುತ್ತಿಗೆ ನೀಡಿರುವುದು ಸರಕಾರದ ಭ್ರಷ್ಟ ಮುಖವನ್ನು ಬಯಲಿಗೆಳೆಯುತ್ತದೆ. ಕೋವಿಡ್‌ನಂತಹ ಸೂಕ್ಷ್ಮ ವಿಚಾರದಲ್ಲಿ ಭ್ರಷ್ಟಾಚಾರದ ಹೊಣೆಗಾರಿಕೆಯನ್ನು ಸಾರ್ವಜನಿಕರೇ ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್