ಕೋವಿಡ್‌ 19 ಸಂಕಷ್ಟ: ಪ್ರವಾಸಿ ಬಸ್‌ಗಳನ್ನು ಕೆಜಿಗೆ 40 ರೂ.ಗೆ ಮಾರಾಟಕ್ಕೆ ಮುಂದಾದ ಮಾಲೀಕ!

Published : Feb 12, 2022, 03:29 PM ISTUpdated : Feb 12, 2022, 06:56 PM IST
ಕೋವಿಡ್‌ 19 ಸಂಕಷ್ಟ:  ಪ್ರವಾಸಿ ಬಸ್‌ಗಳನ್ನು ಕೆಜಿಗೆ 40 ರೂ.ಗೆ ಮಾರಾಟಕ್ಕೆ ಮುಂದಾದ ಮಾಲೀಕ!

ಸಾರಾಂಶ

ಕೋವಿಡ್‌ ಕಾಲದ ಮಧ್ಯೆ ಸಾಲದ ಹೊರೆ ಮತ್ತು ಪೊಲೀಸರ ಮಿತಿಮೀರಿದ ಒತ್ತಡದಿಂದ ಅಸಮಾಧಾನಗೊಂಡ ಕೇರಳದ ಕೊಚ್ಚಿಯ ರಾಯಲ್ ಟ್ರಾವೆಲ್ಸ್ ಪ್ರವಾಸಿ ಬಸ್‌ಗಳ ಮಾಲೀಕ ತಮ್ಮ ಪ್ರವಾಸಿ ಬಸ್‌ಗಳನ್ನು ಕಿಲೋಗೆ 40 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. 

ಕೊಚ್ಚಿ (ಫೆ. 12): ಕಳೆದ ಎರಡು ವರ್ಷಗಳಿಂದ ಕೊರೋಮಾ ಮಹಾಮಾರಿ ಇಡೀ ಜಗತ್ತನ್ನೇ ಸಂಕಷ್ಟಕ್ಕೆ ಸಿಲಿಕಿಸಿದೆ. ಕೋವಿಡ್‌ ಸಾಂಕ್ರಾಮಿಕ (Covid 19) ಆವರಿಸಿದ 2 ವರ್ಷದ ಅವಧಿಯಲ್ಲಿ ಇಡೀ ಜಗತ್ತಿನ ಶೇ.99ರಷ್ಟುಜನರ ಆದಾಯ ಕುಸಿತ ಕಂಡಿದ್ದರೆ, 16 ಕೋಟಿಗಿಂತ ಹೆಚ್ಚು ಜನರು ಹೊಸತಾಗಿ ಬಡತನದ (Poverty) ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ಹೇಳಿತ್ತು. ಈ ಮಧ್ಯೆ ಕೋವಿಡ್‌ ಕಾಲದ ಮಧ್ಯೆ ಸಾಲದ ಹೊರೆ ಮತ್ತು ಪೊಲೀಸರ ಮಿತಿಮೀರಿದ ಒತ್ತಡದಿಂದ ಅಸಮಾಧಾನಗೊಂಡ ಕೇರಳದ ಕೊಚ್ಚಿಯ ರಾಯಲ್ ಟ್ರಾವೆಲ್ಸ್ ಪ್ರವಾಸಿ ಬಸ್‌ಗಳ ಮಾಲೀಕ ತಮ್ಮ ಪ್ರವಾಸಿ ಬಸ್‌ಗಳನ್ನು ಕಿಲೋಗೆ 40 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. 

ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ತಗ್ಗಿಸಲು ಪ್ರತಿಭಟನೆ ಮತ್ತು ಏಕೈಕ ಪರಿಹಾರವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಬಸ್‌ಗಳ ಮಾಲೀಕರಾದ ರಾಯ್ ಹೇಳಿದ್ದಾರೆ. ಗಮನಾರ್ಹವಾಗಿ, ಕೋವಿಡ್-19 ಸಂಬಂಧಿತ ನಿರ್ಬಂಧಗಳು ಪ್ರವಾಸಿ ಬಸ್ ನಿರ್ವಾಹಕರ ಮೇಲೆ ಕೆಟ್ಟ ಪರಿಣಾಮ ಬೀರಿವೆ.  ಅದನ್ನೇ ಉಲ್ಲೇಖಿಸಿದ ರಾಯ್, ಅವರ ಎಲ್ಲಾ ಬಸ್‌ಗಳನ್ನು ಸಾಲದ ಮೇಲೆ ಖರೀದಿಸಲಾಗಿದೆ ಎಂದು ಹೇಳಿದರು. ಸಾಲ ಮರುಪಾವತಿಗೆ ಒತ್ತಾಯಿಸಿ ಹಣಕಾಸುದಾರರು ನಿಯಮಿತವಾಗಿ ಅವರನ್ನು ಭೇಟಿ ಮಾಡಲು ಪ್ರಾರಂಭಿಸಿದ್ದರಿಂದ ಅವರು ಬಸ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. 

"

ಇದನ್ನೂ ಓದಿ: Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

ಬಹುತೇಕ ಬಸ್‌ಗಳು ಹಳೆಯದಲ್ಲದಿದ್ದರೂ, ಲಾಕ್‌ಡೌನ್ ನಂತರ ಅವರು 10 ಬಸ್‌ಗಳನ್ನು ಮಾರಾಟ ಮಾಡಿದ್ದಾರೆ. ಈಗ ಅವರ ಬಳಿ ಇನ್ನೂ 36 ಲಕ್ಷದಿಂದ 40 ಲಕ್ಷ ರೂ ಬೆಲೆ ಬಾಳುವ 10 ಬಸ್‌ಗಳಿವೆ. ರಾಯ್ ಅವರು ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ನಿರಾಸೆಗೊಳಿಸುವಂತಹ ಅನೇಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. 

ತಪಾಸಣೆಯ ಹೆಸರಿನಲ್ಲಿ ಪೋಲಿಸ್‌ ಕಾಟ: "ಲಾಕ್‌ಡೌನ್ ನಂತರ, ಕಳೆದ ಜನವರಿ 1 ರಿಂದ ಬಸ್‌ಗಳು ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ವಾಹನಗಳ ತೆರಿಗೆ ಮತ್ತು ವಿಮೆಯನ್ನು ಪಾವತಿಸಲಾಗಿದೆ. ಆದರೆ, ಪ್ರತಿ ಮೂಲೆಯಲ್ಲೂ ಪೊಲೀಸರು ತಪಾಸಣೆಯ ಹೆಸರಿನಲ್ಲಿ ನಮ್ಮನ್ನು ಪೀಡಿಸಲು ಪ್ರಾರಂಭಿಸಿದರು. ನಾವು ಭಾನುವಾರ ಬಸ್ ಓಡಿಸಿದ್ದೇವೆ ಎಂದು ಆರೋಪಿಸಿ ಪೊಲೀಸರು 2000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಚಾಲಕನ ಬಳಿ ಹಣವಿಲ್ಲದ ಕಾರಣ, ಪ್ರಯಾಣಿಕರೊಬ್ಬರಿಂದ ಅದನ್ನು ತೆಗೆದುಕೊಂಡಿದ್ದಾರೆ ”ಎಂದು ರಾಯ್‌ ಹೇಳಿದ್ದಾರೆ. 

ಬಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸರಿಯಾಗಿದ್ದರು ಪೊಲೀಸರು ದಂಡವನ್ನು ವಿಧಿಸಿದ್ದಾರೆ. ಅದರಂತೆ ತೆರಿಗೆ ಹೊರತಾಗಿ 80,000 ವಿಮಾ ಮೊತ್ತ ಪಾವತಿಸಿ ಬಸ್ ಗಳು ಸಂಚರಿಸುತ್ತಿವೆ. “ಬಸ್ಸುಗಳನ್ನು ಮಾರಾಟ ಮಾಡುತ್ತಿರುವುದು ದೊಡ್ಡ ಮೊತ್ತದ ಸಾಲವನ್ನು ಕಡಿಮೆ ಮಾಡಲು” ಎಂದು ರಾಯ್ ದುಃಖದಿಂದ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು