
ಭೋಪಾಲ್(ಡಿ.16): ಅದೃಷ್ಟವೆಂದರೆ ಹೀಗಿರಬೇಕು! ಒಂದು ಸಣ್ಣ ವಜ್ರದ ಹರಳಿನಿಂದ ಮಧ್ಯಪ್ರದೇಶದ ರೈತನೊಬ್ಬ ರಾತ್ರೋರಾತ್ರಿ ಲಕ್ಷಾಧೀಶನಾಗಿದ್ದಾನೆ.
ಪನ್ನಾ ಜಿಲ್ಲೆ ವಜ್ರದ ಗಣಿಗಳಿಗೆ ಫೇಮಸ್. ಅಲ್ಲಿನ ರೈತ ಲಖನ್ ಯಾದವ್ ಎಂಬಾತನಿಗೆ ಕೃಷ್ಣಾ ಕಲ್ಯಾಣ್ಪುರ ಪ್ರದೇಶದ ಗಣಿಯೊಂದರಲ್ಲಿ 14.98 ಕ್ಯಾರೆಟ್ನ ವಜ್ರವೊಂದು ದೊರೆತಿತ್ತು. ಅದೇ ರೀತಿ ಹಲವು ಕಡೆ ದೊರೆತ 74 ವಜ್ರಗಳನ್ನು ಪಟನಾ ಜಿಲ್ಲಾಡಳಿತ ಇತ್ತೀಚೆಗೆ ಹರಾಜು ಹಾಕಿತ್ತು.
ಲಖನ್ ಯಾದವ್ಗೆ ದೊರೆತ ವಜ್ರದ ಹರಳು ಬರೊಬ್ಬರಿ 60.60 ಲಕ್ಷ ರು.ಗಳಿಗೆ ಹರಾಜಾಗಿದೆ. ಲಖನ್ ಯಾದವ್ ಒಬ್ಬ ಸಣ್ಣ ರೈತನಾಗಿದ್ದು, 2 ಎಕರೆ ಜಮೀನನ್ನು ಹೊಂದಿದ್ದಾನೆ. ಗಣಿ ಕೆಲಸದ ವೇಳೆ ಸಿಕ್ಕ ದೊರೆತ ವಜ್ರದಿಂದಾಗಿ ಆತ ಈಗ ಲಕ್ಷಾಧಿಪತಿಯಾಗಿದ್ದಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ