ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ: ತಾಯಿಗೆ ಆಘಾತ!

Published : Apr 30, 2020, 02:06 PM ISTUpdated : Apr 30, 2020, 02:09 PM IST
ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ: ತಾಯಿಗೆ ಆಘಾತ!

ಸಾರಾಂಶ

ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ| ವಾಸ್ತವ ಕೇಳಿ ತಾಯಿ ಕಂಗಾಲು| ಈ ಮದುವೆ ಒಪ್ಪಿಕೊಳ್ಳಲು ನಾನು ತಯಾರಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ

ಗಾಜಿಯಾಬಾದ್(ಏ.30): ದಿನಸಿ ತರಲೆಂದು ಕಳುಹಿಸಿದ್ದ ಮಗ, ಮನೆಗೆ ಬರುವಾಗ ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆಂದು ಹೇಳಿ ತಾಯಿಯೊಬ್ಬಳು ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ಲಾಕ್‌ಡೌನ್ ಕರ್ತವ್ಯದಲ್ಲಿ ತಲ್ಲೀನರಾಗಿರುವ ಪೊಲೀಸರಿಗೆ ಈ ಪ್ರಕರಣ ಅಚ್ಚರಿಗೀಡು ಮಾಡಿದೆ.

ಹೌದು ಉತ್ತರ ಪ್ರದೇಶದ ಸಾಹಿಬಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರತಿಕ್ರಿಯಿಸಿದ ತಾಯಿ 'ನಾನು ಮಗನನ್ನು ಇಂದು ದಿನಸಿ ತರಲೆಂದು ಕಳುಹಿಸಿದ್ದೆ. ಆದರೆ ಆತ ಹೆಂಡತಿ ಜೊತೆ ಮರಳಿದ್ದೆ. ಈ ಮದುವೆಯನ್ನು ಒಪ್ಪಿಕೊಳ್ಳಲು ನಾನು ತಯಾರಿಲ್ಲ' ಎಂದಿದ್ದಾರೆ.

ಮೆಗಾ ಸ್ಟಾರ್‌ ಸೋದರ ಸೊಸೆ ಜೊತೆ ಪ್ರಭಾಸ್‌ ಮದುವೆ; ನಡೆಯುತ್ತಿದೆ ಸಿದ್ಧತೆ?

ಇನ್ನು ಮದುವೆ ಸಂಬಂಧ ಮಾಹಿತಿ ನೀಡಿರುವ ಮದುವೆ ಗಂಡು 26 ವರ್ಷದ ಗುಡ್ಡು 'ನಾನು ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ಸವಿತಾಳನ್ನುಮದುವೆಯಾಗಿದ್ದೆ. ಆದರೆ ಆಗ ಮ್ಯಾರೆಜ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ಇದನ್ನು ಪಡೆಯಲು ಮತ್ತೆ ಹರಿದ್ವಾರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೆ. ಆದರೆ ಲಾಕ್‌ಡೌನ್‌ನಿಂದ ಇದು ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ಇನ್ನು 'ಹರಿದ್ವಾರದಿಂದ ಮರಳಿದ ಬಳಿಕ ಸವಿತಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಳು. ಲಾಕ್‌ಡೌನ್‌ನಿಂದ ಆಕೆಗೆ ಮನೆ ಖಾಲಿ ಮಾಡಲು ಹೇಳಿದ್ದರಿಂದ, ಅವಳನ್ನು ನನ್ನ ತಾಯಿ ಮನೆಗೆ ಕರೆತರಲು ನಿರ್ಧರಿಸಿದೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು