ಉಚಿತ ಯೋಜನೆಗಳಿಂದ ಆರ್ಥಿಕತೆ ಹಾಳು: ಮೋಹನದಾಸ್‌ ಪೈ

By Kannadaprabha NewsFirst Published Sep 20, 2024, 7:36 AM IST
Highlights

ಇನ್ಫೋಸಿಸ್‌ ಮಾಜಿ ಸಿಎಫ್‌ಒ ಮೋಹನ್‌ದಾಸ ಪೈ, ಚುನಾವಣೆ ಗೆಲ್ಲಲು  ಕಾಂಗ್ರೆಸ್ ಘೋಷಣೆ ಮಾಡಿರುವ ಉಚಿತ ಯೋಜನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ಇನ್ಫೋಸಿಸ್‌ ಮಾಜಿ ಸಿಎಫ್‌ಒ ಮೋಹನ್‌ದಾಸ ಪೈ ಅವರು ಅವರು ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಕಟಿಸಿರುವ ಉಚಿತ ಭರವಸೆಗಳನ್ನು ಪ್ರಶ್ನಿಸಿದ್ದು, ಈ ವೇಳೆ ಅವರು ಕರ್ನಾಟಕದ ಉದಾಹರಣೆ ನೀಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಣಾಳಿಕೆ ಅಂಶ ವಿವರಿಸುವ ವಿಡಿಯೋಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪೈ, ‘ಇದಕ್ಕೆ ಯಾರು ಹಣ ಕೊಡುತ್ತಾರೆ? ಖರ್ಗೆ ಅವರಾ, ಕಾಂಗ್ರೆಸ್‌ ಪಕ್ಷವಾ ಅಥವಾ ಜೈರಾಂ ರಮೇಶ್‌ ಅವರಾ? ಬಿಟ್ಟಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕತೆ ಹಾಳಾಗಿದೆ. ಮೂಲಸೌಕರ್ಯ ಹಾಳಾಗುತ್ತಿದೆ, ಬೆಂಗಳೂರು ರಸ್ತೆಗಳು ಹದಗೆಟ್ಟಿವೆ. ನಮ್ಮ ಯುವಕರಿಗೆ ಭವಿಷ್ಯವಿದೆಯೇ? ರಾಜ್ಯ ತೀವ್ರ ಸಂಕಷ್ಟದಲ್ಲಿದೆ. ಭ್ರಷ್ಟಾಚಾರ ಸಾರ್ವಕಾಲಿಕ ಎತ್ತರದಲ್ಲಿದೆ’ ಎಂದು ಟೀಕಿಸಿದ್ದಾರೆ. 

Latest Videos

ಸಿಎಂಗೆ ಮತ್ತೊಂದು ಗೌರ್ನರ್‌ ಕಂಟಕ: ಸಿಬಿಐ ತನಿಖೆಗೆ ಆಗ್ರಹಿಸಿ ಗೆಹಲೋತ್‌ಗೆ ದೂರು

Another Freebee manifesto. Who will pay for this? Where is the money? All political parties in state elections seem to be bent on demolishing their economy by freebies! Where will this end? Tax payers need to ask questions https://t.co/P4WKvwUpwC

— Mohandas Pai (@TVMohandasPai)
click me!