ಬಲಿಷ್ಠ ಭಾರತಕ್ಕೆ ಬೆದರಿ ತೆರಿಗೆ: ಅಮೆರಿಕ ವಿರುದ್ಧ ಮೋಹನ್‌ ಭಾಗವತ್‌ ಕಿಡಿ

Published : Sep 13, 2025, 01:29 AM IST
RSS Chief Mohan Bhagwat Photo

ಸಾರಾಂಶ

ಭಾರತವೇನಾದರೂ ಬಲಿಷ್ಠವಾದರೆ ಏನಾಗಬಹುದು ಎಂಬ ಆತಂಕದಿಂದ ನಮ್ಮ ದೇಶದ ಮೇಲೆ ತೆರಿಗೆ ಹಾಕಲಾಗಿದೆ. ಇಂಥ ಕ್ರಮಗಳು ಸ್ವಾರ್ಥದಿಂದ ಪ್ರೇರಿತವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್‌ ಭಾಗವತ್‌ ಅಸಮಾಧಾನ ಹೊರಹಾಕಿದ್ದಾರೆ.

ನಾಗ್ಪುರ (ಸೆ.13): ಭಾರತವೇನಾದರೂ ಬಲಿಷ್ಠವಾದರೆ ಏನಾಗಬಹುದು ಎಂಬ ಆತಂಕದಿಂದ ನಮ್ಮ ದೇಶದ ಮೇಲೆ ತೆರಿಗೆ ಹಾಕಲಾಗಿದೆ. ಇಂಥ ಕ್ರಮಗಳು ಸ್ವಾರ್ಥದಿಂದ ಪ್ರೇರಿತವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್‌ ಭಾಗವತ್‌ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಶೇ.50ರಷ್ಟು ತೆರಿಗೆ ವಿರುದ್ಧ ಅಮೆರಿಕದ ಹೆಸರೆತ್ತದೆ ತಿರುಗೇಟು ನೀಡಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಒಂದು ವೇಳೆ ಭಾರತ ಬೆಳವಣಿಗೆ ಹೊಂದಿದರೆ ನಮ್ಮ ಸ್ಥಿತಿ ಏನಾಗಬಹುದು ಎಂಬ ಆತಂಕ ಜಗತ್ತಿನ ಜನರಿಗಿದೆ. ಇದೇ ಕಾರಣಕ್ಕೆ ಭಾರತದ ವಸ್ತುಗಳ ಮೇಲೆ ತೆರಿಗೆ ಹಾಕಲಾಗಿದೆ. ಆದರೆ ನಾವು ಅಂಥದ್ದು ಏನೂ ಮಾಡಿಲ್ಲ. ಅವರು ಏಳು ಸಮುದ್ರದ ಆಚೆ ಇರುವಾಗ, ಯಾವುದೇ ನೇರ ಸಂಪರ್ಕವೂ ಇಲ್ಲದಾಗ ಆತಂಕ ಪಡುತ್ತಿರುವುದು ಯಾಕೆ ಎಂದು ಇದೇ ವೇಳೆ ಪ್ರಶ್ನಿಸಿದರು

ಯಾವ ಶತ್ರುವೂ ಇರುವುದಿಲ್ಲ

ಜನ ಹಾಗೂ ದೇಶಗಳು ನೈಜತೆ ಅರ್ಥಮಾಡಿಕೊಳ್ಳದ ಹೊರತು ಸಮಸ್ಯೆ ಎದುರಿಸುತ್ತಲೇ ಇರಬೇಕಾಗುತ್ತದೆ. ಸಹಾನುಭೂತಿ ಮತ್ತು ಆತಂಕ ಮೆಟ್ಟಿನಿಂತಾಗ ನಮಗೆ ಯಾವ ಶತ್ರುವೂ ಇರುವುದಿಲ್ಲ. ಒಂದು ವೇಳೆ ಮನುಷ್ಯರು ‘ನಾನು’ ಎಂಬುದನ್ನು ಬಿಟ್ಟು ‘ನಾವು’ ಎಂಬ ಮನೋಭಾವ ಬೆಳೆಸಿಕೊಂಡರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಟಾಂಗ್‌ ನೀಡಿದರು.

ಜಗತ್ತು ಇದೀಗ ಪರಿಹಾರಗಳನ್ನು ಹುಡುಕುತ್ತಿದೆ. ಸರಿಯಾದ ದೃಷ್ಟಿಕೋನದ ಕೊರತೆಯಿಂದಾಗಿ ಜಗತ್ತು ಮುಂದಿನ ದಾರಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಭಾರತವು ವಿಶ್ವದ ಸಮಸ್ಯೆಗೆ ಪರಿಹಾರ ಹುಡುಕುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ವಿಶ್ವವನ್ನು ಬೆಳವಣಿಗೆಯ ಪಥದಲ್ಲಿ ಕೊಂಡೊಯ್ಯಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್