
ನವದೆಹಲಿ(ಮಾ.21): ನಿರ್ಭಯಾ ರಕ್ಕಸರು ಏಳು ವರ್ಷಗಳ ಬಳಿಕ ಗಲ್ಲಿಗೇರಿದ್ದಾರೆ. ಆ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಈ ದೀರ್ಘ ಅವಧಿಯ ಹೋರಾಟಲ್ಲಿ ನಿರ್ಭಯಾ ತಾಯಿ ಆಶಾ ದೇವಿಗೆ ಜತೆಯಾಗಿದ್ದವರು ವಕೀಲೆ ಸೀಮಾ ಕುಶ್ವಾಹ.
2014ರಿಂದ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿದ ಯುವ ವಕೀಲೆ, ದುರುಳರನ್ನು ನೇಣುಗಂಬ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವರ ಮೊದಲ ಪ್ರಕರಣವಾಗಿದ್ದು, ದೇಶವೇ ಗಮನಿಸುವಂತೆ ಗೆದ್ದು ಬೀಗಿದ್ದಾರೆ. ಯಾವುದೇ ಶುಲ್ಕ ಪಡೆಯದೇ, ದೊಡ್ಡ ಸವಾಲೊಂದನ್ನು ಅತಿ ಜಯಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಸೀಮಾ, ಪ್ರಕರಣ ನಡೆದಾಗ ನ್ಯಾಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ನಿರ್ಭಯಾ ಪ್ರಕರಣದ ಪರ ವಕಾಲತ್ತಿಗೆ, ಅತ್ಯಾಚಾರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡುವ ಜ್ಯೋತಿ ಲೀಗಲ್ ಟ್ರಸ್ಟ್ ಸೇರಿದ್ದರು.
ಐಎಎಸ್ಗೆ ತಯಾರಿ ನಡೆಸುತ್ತಿರುವ ಸೀಮಾ, ಸದ್ಯ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕರಣದಲ್ಲಿ ಹೆಜ್ಜೆ ಹೆಜ್ಜೆಗೂ ಆಶಾ ದೇವಿ ಜತೆಗಿದ್ದ ಸೀಮಾ, ನಿರ್ಭಯಾ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ