
ತಿರುವನಂತಪುರ (ಮಾ.20): ಪದ್ಮಾ ಲಕ್ಷ್ಮಿ ಕೇರಳದ ಮೊದಲ ತೃತೀಯ ಲಿಂಗಿ ವಕೀಲರೆನಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಬಾರ್ ಕೌನ್ಸಿಲ್ನೊಂದಿಗೆ ವಕೀಲರಾಗಿ ದಾಖಲಾದ ಬಳಿಕ ಈ ಸಾಧನೆ ಮಾಡಿದ ಮೊದಲಿಗರೆನಿಸಿಕೊಂಡರು. ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಾರ್ ದಾಖಲಾತಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದ 1,529 ಕಾನೂನು ಪದವೀಧರರಲ್ಲಿ ಅವರೂ ಕೂಡ ಒಬ್ಬರಾಗಿದ್ದರು. ಪದ್ಮ ಲಕ್ಷ್ಮಿ ಭೌತಶಾಸ್ತ್ರದಲ್ಲಿ ಪದವಿ ಪಡೆದ ನಂತರ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿಗೆ ಸೇರಿಕೊಂಡರು. ಅಭ್ಯಾಸದ ನಂತರ ನ್ಯಾಯಾಂಗ ಸೇವಾ ಪರೀಕ್ಷೆಗಳಲ್ಲಿ ಪಾಸ್ ಆಗುವ ಗುರಿಯನ್ನು ಹೊಂದಿ ಆ ಕುರಿತಾಗಿ ಅಭ್ಯಾಸ ಮಾಡಿದ್ದರು. ರಾಜ್ಯದ ಕೈಗಾರಿಕಾ ಸಚಿವ ಪಿ ರಾಜೀವ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಕೀಲೆಯಾಗಿರುವ ಪದ್ಮಲಕ್ಷ್ಮೀ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಟ್ವಿಟರ್ ಹಾಗೂ ಫೇಸ್ಬುಕ್ ಪುಟದಲ್ಲಿ ಅವರನ್ನು ಅಭಿನಂದಿಸಿ ಸಾಕಷ್ಟು ಪೋಸ್ಟ್ಗಳನ್ನು ಹಾಕಲಾಗಿದೆ. "ಜೀವನದ ಎಲ್ಲಾ ಅಡೆತಡೆಗಳನ್ನು ಜಯಿಸಿ ಕೇರಳದಲ್ಲಿ ಮೊದಲ ತೃತೀಯ ಲಿಂಗಿ ವಕೀಲರಾಗಿ ದಾಖಲಾದ ಪದ್ಮಾ ಲಕ್ಷ್ಮಿ ಅವರಿಗೆ ಅಭಿನಂದನೆಗಳು. ಖಂಡಿತಾ ಈ ಹಾದಿಯಲ್ಲಿ ಅಡೆತಡೆಗಳಿದ್ದವು. ಜನರ ಮೌನ ಮತ್ತು ನಿರುತ್ಸಾಹ ಗಳಿದ್ದವು. ಪದ್ಮಾ ಲಕ್ಷ್ಮಿ ಈ ಎಲ್ಲವನ್ನು ದಾಟುವ ಮೂಲಕ ಕಾನೂನು ವಿಭಾಗದಲ್ಲಿ ತಮ್ಮದೇ ಆದ ಇತಿಹಾಸ ಬರೆದಿದ್ದಾರೆ ಎಂದು ಸಚಿವ ರಾಜೀವ್ ಮಲಯಾಳಂನ ಬರೆದುಕೊಂಡಿದ್ದಾರೆ.
ಪದ್ಮ ಲಕ್ಷ್ಮಿ ಅವರ ಜೀವನವು ತೃತೀಯ ಲಿಂಗಿ ಸಮುದಾಯದಿಂದ ಹೆಚ್ಚಿನ ಜನರಿಗೆ ಕಾನೂನು ವೃತ್ತಿಯನ್ನು ಪ್ರವೇಶಿಸಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ