ರಾಮ ಮಂದಿರ ನಕ್ಷೆಗೆ ಗ್ರೀನ್ ಸಿಗ್ನಲ್, ಭೂಮಿ ಅಗೆಯಲು ಅಯೋಧ್ಯೆಗೆ ಯಂತ್ರಗಳ ಎಂಟ್ರಿ!

Published : Sep 06, 2020, 03:13 PM IST
ರಾಮ ಮಂದಿರ ನಕ್ಷೆಗೆ ಗ್ರೀನ್ ಸಿಗ್ನಲ್, ಭೂಮಿ ಅಗೆಯಲು ಅಯೋಧ್ಯೆಗೆ ಯಂತ್ರಗಳ ಎಂಟ್ರಿ!

ಸಾರಾಂಶ

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಭವ್ಯ ರಾಮ ಮಂದಿರದ ನಕ್ಷೆಗೆ ಗ್ರೀನ್ ಸಿಗ್ನಲ್| ಎಲ್ಲಕ್ಕಿಂತ ಮೊದಲು ಮಂದಿರ ನಿರ್ಮಿಸಲು ಅಡಿಪಾಯ ಹಾಕಲು ಭೂಮಿ ಅಗೆಯಲು ಆರಂಭ| ಈ ಎಲ್ಲಾ ಯಂತ್ರಗಳು ಖಾನ್ಪುರದಿಂದ ಬಂದಿವೆ 

ಅಯೋಧ್ಯೆ(ಸೆ.06): ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಭವ್ಯ ರಾಮ ಮಂದಿರದ ನಕ್ಷೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಶ್ರೀರಾಮನ ಕಾರ್ಯ ಮತ್ತಷ್ಟು ವೇಗ ಪಡೆದುಕೊಂಡಿದೆ. ಎಲ್ಲಕ್ಕಿಂತ ಮೊದಲು ಮಂದಿರ ನಿರ್ಮಿಸಲು ಅಡಿಪಾಯ ಹಾಕಲು ಭೂಮಿ ಅಗೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಮನೂರಿಗೆ ದೊಡ್ಡ ದೊಡ್ಡ ಯಂತ್ರಗಳು ಎಂಟ್ರಿ ಕೊಟ್ಟಿವೆ. 

ಈ ಎಲ್ಲಾ ಯಂತ್ರಗಳು ಖಾನ್ಪುರದಿಂದ ಬಂದಿವೆ ಎನ್ನಲಾಗಿವೆ. ಈ ನಕ್ಷೆಯಲ್ಲಿ ಮಂದಿರ ನಿರ್ಮಿಸುವ ಐದು ಎಕರೆ ಕ್ಷೇತ್ರದೊಂದಿಗೆ ಎಪ್ಪತ್ತು ಎಕರೆ ವಿಸ್ತೀರ್ಣದ ಲೇಔಟ್ ಇದೆ.

200 ಅಡಿ ಆಳವಿರಲಿದೆ ರಾಮ ಮಂದಿರದ ಅಡಿಪಾಯ

ಮಷೀನ್ ಇಂಜಿನಿಯರ್ ಎ. ಕೆ. ಯಾದವ್ ಅನ್ವಯ ಇದರಿಂದ ಮಂದಿರದ ಅಡಿಪಾಯ ಅಗೆಯಲಾಗುತ್ತದೆ. 1200 ಸ್ಥಾನಗಳಲ್ಲಿ ಸ್ತಂಭ ನಿರ್ಮಿಸುವ ನಿಟ್ಟಿನಲ್ಲಿ ಆಳವಾಗಿ ಅಗೆಯಲಾಗುತ್ತದೆ. ಈ ಮಷೀನ್ ಅಡಿಪಾಯ ತಯಾರಿಸಲು ಬಳಸಲಾಗುತ್ತದೆ. 

ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಮಂತ್ರಿ ಚಂಪತ್ ರಾಯ್ ಅನ್ವಯ ಅಡಿಪಾಯಕ್ಕೆ ಬಲಿಷ್ಟವಾದ ಕಾಂಕ್ರೀಟ್ ಮೆಟಿರಿಯಲ್ ಬಳಸಲಾಗುತ್ತದೆ.  ಈ ಅಡಿಪಾಯದಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತದೆ. ಇದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳು ಬರಲಾರಂಭಿಸಿವೆ. ಇವೆಲ್ಲವನ್ನೂ ರಾಮ ಜನ್ಮ ಭೂಮಿಯ ಗೇಟ್ ನಂಬರ್ 3ರಿಂದ ಎಂಟ್ರಿ ನೀಡಲಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!