
ಕೊಲ್ಲಂ(ಜೂ.15): ಕಣ್ಣಿಗೆ ಕಾಣದ ಮಹಾಮಾರಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದರೆ, ಅದೇ ವೈರಾಣುವಿಗೆ ‘ಕೊರೋನಾ ದೇವಿ’ ಎಂದು ಹೆಸರಿಟ್ಟು ಕೇರಳ ಅರ್ಚಕರೊಬ್ಬರು ದಿನನಿತ್ಯ ಪ್ರಾರ್ಥನೆ ನಡೆಸುತ್ತಿದ್ದಾರೆ. ಕೊಲ್ಲಂ ಜಿಲ್ಲೆಯ ಕಡಕ್ಕಲ್ ನಿವಾಸಿ ಅನಿಲನ್ ಎಂಬವರೇ ಕೊರೋನಾ ದೇವಿಗೆ ಪೂಜೆ ಸಲ್ಲಿಸುತ್ತಿರುವ ವ್ಯಕ್ತಿ. ಥರ್ಮಕೋಲ್ನಿಂದ ವೈರಾಣುವಿನ ಚಿತ್ರ ರಚಿಸಿ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಅವರು, ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಕೋರೋನಾ ಮಹಾದೇವನ ಚಮತ್ಕಾರ, ಇಲ್ಲಿ ಒಬ್ಬರಿಗೂ ಸೋಂಕಿಲ್ಲ!
ಕೊರೋನಾ ದೇವಿಗೆ ನಾನು ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದು, ಕೊರೋನಾ ವಿರುದ್ದ ಹೋರಾಟಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು, ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿರುವ ವಿಜ್ಞಾನಿಗಳು, ರಕ್ಷಣಾ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಪ್ರಾರ್ಥನೆ ಮಾಡುತ್ತಿರುವುದಾಗಿ ಅನಿಲನ್ ಹೇಳಿದ್ದಾರೆ.
ಕಾಯಿಲೆ ಗುಣಪಡಿಸಿ, ಇಷ್ಟಾರ್ಥ ಪೂರೈಸುವ ಎಟ್ಟಮನೂರ್ ಮಹಾದೇವ!
ಕೊರೋನಾಗೆ ದೇವರ ಸ್ಥಾನ ಕೊಟ್ಟು ಪೂಜೆ ಮಾಡುತ್ತಿರುವ ಅನಿಲನ್ ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದೆ. ಆದರೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನನ್ನದು. 33 ಕೋಟಿ ದೇವತೆಗಳಿದ್ದು, ಯಾವ ದೇವರನ್ನು ಪೂಜಿಸಲು ಸಂವಿಧಾನ ನನಗೆ ಹಕ್ಕು ಕೊಟ್ಟಿದೆ. ನಾನು ಕೊರೋನಾ ದೇವಿಯನ್ನು ಪೂಜಿಸುತ್ತೇನೆ ಎಂದು ಅನಿಲನ್ ಹೇಳುತ್ತಾರೆ. ಅಲ್ಲದೇ ಈ ಭೀತಿಯ ವೇಳೆಯಲ್ಲಿ ದೇವಸ್ಥಾನ ತೆರೆಯುವ ಸರ್ಕಾರದ ನಿರ್ಧಾರಕ್ಕೆ ತನ್ನ ವಿರೋಧವಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ