ಅನಾಥ ಜೋಡಿಗೆ ಪೋಷಕರಾಗಿ ಮದುವೆ ನೆರವೇರಿಸಿದ ಡಿಸಿಎಂ, ಜಿಲ್ಲಾಧಿಕಾರಿ ಜೋಡಿ!

Published : Dec 21, 2020, 07:49 AM IST
ಅನಾಥ ಜೋಡಿಗೆ ಪೋಷಕರಾಗಿ ಮದುವೆ ನೆರವೇರಿಸಿದ ಡಿಸಿಎಂ, ಜಿಲ್ಲಾಧಿಕಾರಿ ಜೋಡಿ!

ಸಾರಾಂಶ

ಅನಾಥ ಜೋಡಿಯೊಂದರ ವಿವಾಹ| ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದಂಪತಿ ಮತ್ತು ನಾಗಪುರದ ಜಿಲ್ಲಾಧಿಕಾರಿ ದಂಪತಿ ಪೋಷಕರು| 

ನಾಗಪುರ(ಡಿ.21): ಅನಾಥ ಜೋಡಿಯೊಂದರ ವಿವಾಹದ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದಂಪತಿ ಮತ್ತು ನಾಗಪುರದ ಜಿಲ್ಲಾಧಿಕಾರಿ ದಂಪತಿ ಪೋಷಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟ ಶ್ಲಾಘನೀಯ ಘಟನೆ ಭಾನುವಾರ ನಡೆದಿದೆ.

ಥಾಣೆ ಮತ್ತು ನಾಗಪುರದ ಅನಾಥಾಶ್ರಮಗಳಲ್ಲಿ ಬೆಳೆದ ಪುರುಷ ಮತ್ತು ಮಹಿಳೆಗೆ ಭಾನುವಾರ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅನಿಲ್‌ ದೇಶ್‌ಮುಖ್‌ ಮತ್ತು ಅವರ ಪತ್ನಿ ಮಹಿಳೆಯ ಪೋಷಕರಾಗಿ ಕನ್ಯಾದಾನ ನೆರವೇರಿಸಿಕೊಟ್ಟರು.

ಮತ್ತೊಂದೆಡೆ ನಾಗಪುರದ ಜಿಲ್ಲಾಧಿಕಾರಿ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ ವರನ ಪೋಷಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ