ರಾಜೀವ್ ಧವನ್ ವಜಾಗೊಳಿಸಿದ ಜಮೈತ್: ನಾನ್ಸೆನ್ಸ್ ಎಂದ ವಕೀಲ!

Published : Dec 03, 2019, 01:01 PM ISTUpdated : Dec 03, 2019, 05:12 PM IST
ರಾಜೀವ್ ಧವನ್ ವಜಾಗೊಳಿಸಿದ ಜಮೈತ್: ನಾನ್ಸೆನ್ಸ್ ಎಂದ ವಕೀಲ!

ಸಾರಾಂಶ

ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ವಜಾ| ರಾಜೀವ್ ಧಬನ್ ವಜಾಗೊಳಿಸಿದ ಜಮೈತ್ ಉಲೆಮಾ-ಇ-ಹಿಂದ್| ಅನಾರೋಗ್ಯದ ಕಾರಣ ನೀಡಿ ರಾಜೀವ್ ಧವನಾ ವಕಾಲತ್ತಿನಿಂದ ವಜಾ| ಮೇಲ್ಮನವಿ ಅರ್ಜಿಯ ವಕಾಲತ್ತು ನಡೆಸಲಿರುವ ಏಜಾಜ್ ಮಕ್ಬೂಲ್| ಜಮೈತ್ ಉಲೆಮಾ-ಇ-ಹಿಂದ್ ನಡೆ ಟೀಕಿಸಿದ ರಾಜೀವ್ ಧವನ್| ರಾಮಜನ್ಮಭೂಮಿಯ ನಕ್ಷೆಯನ್ನು ಹರಿದು ಹಾಕಿ ಸುದ್ದಿಯಾಗಿದ್ದ ರಾಜೀವ್ ಧವನ್|

ನವದೆಹಲಿ(ಡಿ.03): ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ.

ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ಅವರನ್ನು ವಜಾಗೊಳಿಸಿ ಜಮೈತ್ ಉಮೆಲಾ-ಇ-ಹಿಂದ್ ಆದೇಶ ನೀಡಿದೆ. ಸುಪ್ರೀಂಕೋರ್ಟ್’ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ವಕೀಲ ಏಜಾಜ್ ಮಕ್ಬೂಲ್ ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.

ಅನಾರೋಗ್ಯ ಕಾರಣಕ್ಕೆ ರಾಜೀವ್ ಧವನ್ ಅವರನ್ನು ಪ್ರಕರಣದ ವಕಾಲತ್ತಿನಿಂದ ಕೈಬಿಡಲಾಗಿದೆ ಎಂದು ಏಜಾಜ್ ಮಕ್ಬೂಲ್ ಸ್ಪಷ್ಟಪಡಿಸಿದ್ದಾರೆ. ಆದರೆ ಜಮೈತ್ ಉಲೆಮಾ-ಇ-ಹಿಂದ್ ನಡೆಯನ್ನು ರಾಜೀವ್ ಧವನ್ ಟೀಕಿಸಿದ್ದಾರೆ.

ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

ಜಮೈತ್ ನೀಡಿರುವ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜೀವ್, ದೀರ್ಘ ಕಾಲ ಪ್ರಕರಣದ ವಕಾಲತ್ತು ನಡೆಸಿದ್ದ  ತಮ್ಮನ್ನು ಈ ರೀತಿ ಅವಮಾನಿಸಿದ್ದು ಸರಿಯಲ್ಲ ಎಂದು ಫೇಸ್’ಬುಕ್ ಪೋಸ್ಟ್ ಮಾಡಿದ್ದಾರೆ.

ಅಯೋಧ್ಯೆ ವಿವಾದ ಸಂಬಂಧ ಅ.16ರಂದು ಸುಪ್ರೀಂಕೋರ್ಟ್ ನಲ್ಲಿ ನಡೆದ ಅಂತಿಮ ವಿಚಾರಣೆ ವೇಳೆ, ರಾಮಜನ್ಮಭೂಮಿಯ ನಕ್ಷೆಯನ್ನು ರಾಜೀವ್ ಧವನ್ ಹರಿದುಹಾಕಿ ವಿವಾದ ಸೃಷ್ಟಿಸಿದ್ದರು.

ಶಾಂತಿ ಭಂಗ ಮಾಡೋರು ಹಿಂದೂಗಳಷ್ಟೇ, ಮುಸ್ಲಿಮರಲ್ಲ: ರಾಜೀವ್ ಧವನ್!

ಅಲ್ಲದೇ ಸಮಾಜದಲ್ಲಿ ಕೋಮುದಂಗೆಗಳು  ಸಂಭವಿಸಲು ಹಿಂದೂಗಳೇ ಕಾರಣ ಹೊರತು ಮುಸ್ಲಿಮರಲ್ಲ ಎಂದು ರಾಜೀವ್ ಧವನಬ್ ಇತ್ತಿಚೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana