250 ವರ್ಷಗಳ ನಂತರ ಕೇರಳದಲ್ಲಿ ಕುಂಭಮೇಳ

Kannadaprabha News   | Kannada Prabha
Published : Feb 02, 2026, 09:56 AM IST
Kumbhamela

ಸಾರಾಂಶ

ಸುಮಾರು ಎರಡೂವರೆ ಶತಮಾನದ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ದಕ್ಷಿಣ ಗಂಗೆ ಎಂದೇ ಕರೆಯಲಾಗುವ ಭಾರತಪುಳ ನದಿಯ ತಟದಲ್ಲಿ ನಡೆಯುತ್ತಿರುವ ಮೇಳಕ್ಕೆ ಜ.18ರಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರು ಚಾಲನೆ ನೀಡಿದ್ದರು.

ತಿರುವನಂತಪುರಂ: ಸುಮಾರು ಎರಡೂವರೆ ಶತಮಾನದ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿದೆ. ದಕ್ಷಿಣ ಗಂಗೆ ಎಂದೇ ಕರೆಯಲಾಗುವ ಭಾರತಪುಳ ನದಿಯ ತಟದಲ್ಲಿ ನಡೆಯುತ್ತಿರುವ ಮೇಳಕ್ಕೆ ಜ.18ರಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರು ಚಾಲನೆ ನೀಡಿದ್ದರು. ಇದು 18 ದಿನ ನಡೆಯಲಿದ್ದು, ಈಗಾಗಲೇ ಸಾವಿರಾರು ಭಕ್ತರು ಮಾಮಾಂಕಂ ಮೈದಾನಕ್ಕೆ ಭೇಟಿ ನೀಡಿದ್ದಾರೆ.

12 ವರ್ಷಗಳಲ್ಲೊಮ್ಮೆ ಮೇಳ

ಉತ್ತರಭಾರತದಲ್ಲಿ ನಡೆಯುವ ಕುಂಭಮೇಳದಂತೆ ಇಲ್ಲೂ 12 ವರ್ಷಗಳಲ್ಲೊಮ್ಮೆ ಮೇಳ ನಡೆಯುತ್ತಿತ್ತು. ಆದರೆ ಬ್ರಿಟಿಷ್‌ ಆಡಳಿತದಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಸ್ವಾತಂತ್ರ್ಯ ದೊರತಮೇಲೆ ಪುನಾರಂಭಗಳ ಯತ್ನಗಳು ನಡೆದಿದ್ದವಾದರೂ ಯಶಸ್ವಿಯಾಗಿರಲಿಲ್ಲ.

ರಾಜಕೀಯ ಲೆಕ್ಕಾಚಾರ:

250 ವರ್ಷಗಳ ಬಳಿಕ ಕೇರಳದಲ್ಲಿ ಕುಂಭಮೇಳವನ್ನು ಆರಂಭಿಸಿರುವುದ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎಂಬ ವಿಶ್ಲೇಷಣೆಗಳಿವೆ. ಕೆಲ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಹಿಂದೂಗಳ ಮತಗಳನ್ನು ಸೆಳೆಯಲು ಆಡಳಿತಾರೂಢ ಕಮ್ಯುನಿಸ್ಟ್‌ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾರಿಗೇನು ಲಾಭ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಇದೇ ಮೊದಲ ಸಲ ₹50 ಲಕ್ಷ ಕೋಟಿ ದಾಟಿದ ಕೇಂದ್ರ ಬಜೆಟ್ ಗಾತ್ರ! ಮೋದಿ ಸರ್ಕಾರ ಈ ವರ್ಷ ಮಾಡುವ ಸಾಲವೆಷ್ಟು?