ರಾವಣ ಪುಷ್ಪಕ ವಿಮಾನ, ಗಣೇಶನ ಪ್ಲಾಸ್ಟಿಕ್‌ ಸರ್ಜರಿ ಎಲ್ಲಾ ಮೂಢನಂಬಿಕೆ ಎಂದಿದ್ದಕ್ಕೆ ಶಂಶೀರ್‌ ಕ್ಷಮೆ ಕೇಳಲ್ಲ: ಸಿಪಿಎಂ

Published : Aug 03, 2023, 06:52 AM IST
ರಾವಣ ಪುಷ್ಪಕ ವಿಮಾನ, ಗಣೇಶನ ಪ್ಲಾಸ್ಟಿಕ್‌ ಸರ್ಜರಿ ಎಲ್ಲಾ ಮೂಢನಂಬಿಕೆ ಎಂದಿದ್ದಕ್ಕೆ ಶಂಶೀರ್‌ ಕ್ಷಮೆ ಕೇಳಲ್ಲ: ಸಿಪಿಎಂ

ಸಾರಾಂಶ

ವಿಶ್ವದಲ್ಲಿ ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆಸಿದ್ದು ಗಣೇಶನಿಗೆ, ರಾವಣ ಪುಷ್ಪಕ ವಿಮಾನ ಬಳಸುತ್ತಿದ್ದ ಎಂಬುದೆಲ್ಲಾ ಮೂಢನಂಬಿಕೆ ಎಂಬ ತಮ್ಮ ಹೇಳಿಕೆ ಕುರಿತು ಕೇರಳ ವಿಧಾನಸಭೆ ಸ್ಪೀಕರ್‌ ಎ.ಎನ್‌.ಶಂಶೀರ್‌ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಸಿಪಿಎಂ ಹೇಳಿದೆ.

ತಿರುವನಂತಪುರ: ವಿಶ್ವದಲ್ಲಿ ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆಸಿದ್ದು ಗಣೇಶನಿಗೆ, ರಾವಣ ಪುಷ್ಪಕ ವಿಮಾನ ಬಳಸುತ್ತಿದ್ದ ಎಂಬುದೆಲ್ಲಾ ಮೂಢನಂಬಿಕೆ. ಇದರ ಬದಲು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂಬ ತಮ್ಮ ಹೇಳಿಕೆ ಕುರಿತು ಕೇರಳ ವಿಧಾನಸಭೆ ಸ್ಪೀಕರ್‌ ಎ.ಎನ್‌.ಶಂಶೀರ್‌ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಆಡಳಿತಾರೂಢ ಸಿಪಿಎಂ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಸಿಪಿಎಂ ನಾಯಕರು, ಸಭಾಪತಿಗಳು ನಿಂದನಾತ್ಮಕ ಹೇಳಿಕೆಗಳೇನು ನೀಡಿಲ್ಲ. ಅವರು ಶಿಕ್ಷಣವನ್ನು ವೈಜ್ಞಾನಿಕ ಅಂಶಗಳ ಆಧಾರದಲ್ಲಿ ಇರಬೇಕು ಎಂದು ಹೇಳಿದ್ದರು. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ಇದಕ್ಕೆ ಕೋಮು ಬಣ್ಣ ಲೇಪಿಸಿ ಗಲಭೆ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ ತಮ್ಮ ಮೊದಲ ಪ್ರಧಾನಿ ನೆಹರು ಅವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.

ಖಾಕಿ ತೊಟ್ಟು ಪೊಲೀಸ್‌ ಸ್ಟೇಷನ್‌ನಲ್ಲಿ ಕೋಳಿ ಸಾರು ಮಾಡಿದ ವಿಡಿಯೋ ವೈರಲ್‌, ನೋಟಿಸ್‌ ನೀಡಿದ ಐಜಿ!

ಕೇರಳದ ಈ ಸುಂದರ ಹಳ್ಳಿಯೀಗ ಪ್ರವಾಸಿಗರ ಸ್ವರ್ಗ, ಊರವರಿಗೆ ಮಾತ್ರ ನರಕ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!