ಕಮ​ಲ ಪಕ್ಷ​ದಿಂದ ಎಲೆ​ಕ್ಷ​ನ್‌ ಸ್ಪರ್ಧಿ​ಸ​ಲ್ಲ: ಕೇರಳದ ಬಿಜೆ​ಪಿ ಅಚ್ಚ​ರಿ ಅಭ್ಯರ್ಥಿ ಘೋಷ​ಣೆ!

Published : Mar 17, 2021, 05:18 PM ISTUpdated : Mar 17, 2021, 05:21 PM IST
ಕಮ​ಲ ಪಕ್ಷ​ದಿಂದ ಎಲೆ​ಕ್ಷ​ನ್‌ ಸ್ಪರ್ಧಿ​ಸ​ಲ್ಲ: ಕೇರಳದ ಬಿಜೆ​ಪಿ ಅಚ್ಚ​ರಿ ಅಭ್ಯರ್ಥಿ ಘೋಷ​ಣೆ!

ಸಾರಾಂಶ

ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಹಿಂದು​ಳಿದ ‘ಪಣಿಯಾ’ ಬುಡ​ಕಟ್ಟು ಸಮು​ದಾ​ಯದ ಮೊದಲ ಎಂಬಿಎ ಪದ​ವೀ​ಧದರ| ಕಮ​ಲ ಪಕ್ಷ​ದಿಂದ ಎಲೆ​ಕ್ಷ​ನ್‌ ಸ್ಪರ್ಧಿ​ಸ​ಲ್ಲ: ಕೇರಳದ ಬಿಜೆ​ಪಿ ಅಚ್ಚ​ರಿ ಅಭ್ಯರ್ಥಿ ಘೋಷ​ಣೆ!

ಕಲ್ಲಿ​ಕೋ​ಟೆ(ಮಾ.17): ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಹಿಂದು​ಳಿದ ‘ಪಣಿಯಾ’ ಬುಡ​ಕಟ್ಟು ಸಮು​ದಾ​ಯದ ಮೊದಲ ಎಂಬಿಎ ಪದ​ವೀ​ಧ​ರ​ನಾದ ಸಿ. ಮಣಿ​ಕಂಠನ್‌ ಅಲಿ​ಯಾಸ್‌ ಮಣಿ​ಕು​ಟ್ಟನ್‌ ಅವ​ರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಆದರೆ ಇದರ ಬೆನ್ನಲ್ಲೇ, ತಾವು ಬಿಜೆಪಿ ಕಾರ್ಯ​ಕ​ರ್ತನೂ ಅಲ್ಲ. ಬಿಜೆ​ಪಿಯ ಬೆಂಬ​ಲಿ​ಗನೂ ಅಲ್ಲ. ಹೀಗಾಗಿ ಬಿಜೆ​ಪಿಯ ಟಿಕೆ​ಟ್‌​ನಿಂದ ಚುನಾ​ವಣಾ ಕಣ​ಕ್ಕಿ​ಳಿ​ಯು​ವು​ದಿಲ್ಲ ಎಂದು ಸಾಮಾಜಿಕ ಜಾಲ​ತಾ​ಣದ ಮೂಲಕ ಘೋಷಿ​ಸಿ​ದ್ದಾರೆ.

ಒಂದು ದೇಶ, ಒಂದು ಎಲೆಕ್ಷನ್‌ಗೆ ಮತ್ತಷ್ಟು ಬಲ!

ಕೇರ​ಳ​ದಲ್ಲಿ ಇದು ಬಿಜೆ​ಪಿಗೆ ದೊಡ್ಡ ಮುಜು​ಗ​ರ​ವಾ​ಗಿ ಪರಿ​ಣ​ಮಿ​ಸಿದೆ. ಈ ಬಗ್ಗೆ ಮಾತ​ನಾ​ಡಿದ ಮಣಿ​ಕು​ಟ್ಟನ್‌ ಅವರು, ‘ವಯ​ನಾಡು ವ್ಯಾಪ್ತಿಗೆ ಬರುವ ಮನಂಥ​ವಾಡಿ ವಿಧಾ​ನ​ಸಭೆ ಚುನಾ​ವಣಾ ಕಣಕ್ಕೆ ಕೇಂದ್ರ ಬಿಜೆಪಿ ನಾಯ​ಕತ್ವ ನನ್ನ ಹೆಸ​ರನ್ನು ಪ್ರಕ​ಟಿ​ಸಿ​ರು​ವುದು ಟೀವಿ​ಗ​ಳಿಂದ ಗೊತ್ತಾ​ಯಿತು. ಈ ವಿಚಾ​ರ​ದಿಂದ ನನಗೆ ಆಶ್ಚರ್ಯ​ವಾ​ಗಿದೆ. ಈ ಬಗ್ಗೆ ಚರ್ಚಿ​ಸಲು ಬಿಜೆಪಿ ನಾಯ​ಕರು ನನಗೆ ಕರೆ ಮಾಡಿ​ದಾ​ಗಲೂ, ನಾನು ಪಕ್ಷ ರಾಜ​ಕೀಯ ಮತ್ತು ಚುನಾ​ವಣೆ ರಾಜ​ಕೀ​ಯಕ್ಕೆ ಬರಲ್ಲ ಎಂಬ ನಿರ್ಧಾ​ರ​ವನ್ನೇ ತಿಳಿ​ಸಿ​ದ್ದೇ​ನೆ’ ಎಂದಿ​ದ್ದಾರೆ.

ಯಾವಾಗ ಚುನಾವಣೆ: 

ಕೇರಳ (140 ಕ್ಷೇತ್ರ)| ಮಲ್ಲಪುರಂ ಉಪ-ಚುನಾವಣೆ| ಒಂದು-ಹಂತ|

ಚುನಾವಣೆ ದಿನಾಂಕ: ಏಪ್ರಿಲ್ 6

ಮತ ಎಣಿಕೆ ದಿನಾಂಕ: ಮೇ 2

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇದು ಚಿನ್ನದ ಕಾಫಿ, ಟೀ! ಒಂದು ಕಪ್​ಗೆ ಒಂದು ಲಕ್ಷ: ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ ಕೇಳಿ
ಕೋಟ್ಯಧಿಪತಿಗಳ ಮನೆ ಬಾಗಿಲಿಗೆ ಪಕ್ಕದ್ಮನೆಯವರ ಹಾಲು, ಮೊಸರು: ಮುಲಾಜಿಲ್ಲದೇ ಕುಡಿದು-ತೇಗಿದ್ರು