ಪ್ರಧಾನಿ ಮೋದಿಗೆ ಕೇರಳ ಜನತೆಯ ಅದ್ಧೂರಿ ಸ್ವಾಗತ; ಕ್ರೀಡಾಂಗಣದಲ್ಲಿ ಫ್ಲಾಶ್ ಲೈಟ್ ಮಿಂಚು!

Published : Apr 02, 2021, 09:51 PM IST
ಪ್ರಧಾನಿ ಮೋದಿಗೆ ಕೇರಳ ಜನತೆಯ ಅದ್ಧೂರಿ ಸ್ವಾಗತ; ಕ್ರೀಡಾಂಗಣದಲ್ಲಿ ಫ್ಲಾಶ್ ಲೈಟ್ ಮಿಂಚು!

ಸಾರಾಂಶ

ಪಂಚ ರಾಜ್ಯ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಿಂದ ಕೇರಳಕ್ಕೆ ಆಗಮಿಸಿದ್ದಾರೆ. ತಿರುವನಂತಪುರಕ್ಕೆ ಆಗಮಿಸಿದ ಮೋದಿಗೆ ಜನತೆ ನೀಡಿದ ಸ್ವಾಗತ ಮೈ ಜುಮ್ಮೆನಿಸುವಂತಿದೆ. ಈ ಕುರಿತ ವಿಡಿಯೋ ಇಲ್ಲಿದೆ.

ತಿರುವನಂತಪುರಂ(ಎ.02): ಸಿನಿಮಾದಲ್ಲಿ ಹೀರೋ ಎಂಟ್ರಿಯಾಗುವ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವೇದಿಕೆಗೆ ಆಗಮಿಸಿದ್ದಾರೆ. ನಾಯಕರಿಗೆ ಕೈಮುಗಿಯುತ್ತಲೇ ಆಗಮಿಸಿದ ಮೋದಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕೇರಳ ಜನತೆ ಅದ್ಧೂರಿ ಸ್ವಾಗತ ನೀಡಿದ್ದಾರೆ. ತಮ್ಮ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.

ಮೋದಿ ವಿಡಿಯೋ ಎಡಿಟ್ ಮಾಡಿ ಪೇಚಿಗೆ ಸಿಲುಕಿದ ಕಾಂಗ್ರೆಸ್; ಸತ್ಯ ಬಯಲಾದಾಗ ಟ್ವೀಟ್ ಡಿಲೀಟ್!

ತಿರುವನಂತಪುರಂನ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮೋದಿಗೆ ಸಿಕ್ಕ ಸ್ವಾಗತವೇ ಮೈಜುಮ್ಮೆನಿಸುವಂತಿದೆ. ಸಂಪೂರ್ಣ ಕ್ರೀಡಾಂಗಣ ಭರ್ತಿಯಾಗಿದೆ. ಮೋದಿ ಮೋದಿ ಅನ್ನೋ ಘೋಷಣೆಯಲ್ಲಿ, ಕಾರ್ಯಕ್ರಮ ನಿರೂಪಕ ಅದೆಷ್ಟೆ ಕಿರುಚಿದರೂ ಧ್ವನಿ ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ.

"

ಕೇಳದ ಕೊನ್ನಿಯಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಮೋದಿ, ನೇರವಾಗಿ ತಿರುವನಂತಪುರಂಗೆ ಬಂದಿಳಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಕೊನ್ನಿಯಲ್ಲೇ ಪ್ರಖ್ಯಾತ ಅಯ್ಯಪ್ಪ ದೇವಸ್ಥಾನವಿದೆ. ಈ ರ್ಯಾಲಿ ಮುಗಿಸಿ, ತಿರುವನಂತಪುರಂಕ್ಕೆ ಆಗಮಿಸಿದ ಮೋದಿಗೆ ಕೇರಳ ಜನತೆ ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ.

2021ರ ಕೇರಳ ವಿಧಾನಸಭಾ ಚುನಾವಣ ಪ್ರಚಾರಕ್ಕಾಗಿ ಮೋದಿ 2ನೇ ಬಾರಿಗೆ ಆಗಮಿಸಿದ್ದಾರೆ. ಪ್ರತಿ ಭಾರಿ ಕೇರಳ ಜನತೆಯ ಪ್ರೀತಿಯ ಸ್ವಾಗತಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!