
ನವದೆಹಲಿ (ಆ.25): ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ, ತಾನು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೇನೆ ಎಂದು ದೇಶದ ಖ್ಯಾತ ವಿಮಾನಯಾನ ಕಂಪನಿ ಸ್ಪೈಸ್ಜೆಟ್ ಹೇಳಿಕೊಂಡಿದೆ. ಇದರಿಂದಾಗಿ ದೇಶದ ಮತ್ತೊಂದು ಏರ್ಲೈನ್ಸ್ ಸಂಕಷ್ಟಕ್ಕೀಡಾದಂತಾಗಿದೆ. ಈ ಹಿಂದೆ ಜೆಟ್ ಏರ್ವೇಸ್, ಕಿಂಗ್ ಫಿಶರ್ ಹಾಗೂ ಇತ್ತೀಚೆಗೆ ಗೋ ಫಸ್ಟ್ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸಿದ್ದವು. ಈ ಸಾಲಿಗೆ ಇನ್ನೊಂದು ಕಂಪನಿ ಸೇರಿಕೊಂಡಿದೆ.
ಈ ಹಿಂದೆ ಕಂಪನಿಯ ಮಾಲೀಕತ್ವ ಬದಲಾದಾಗ ಕಂಪನಿಯು ಮೂಲ ಮಾಲೀಕ ಕಲಾನಿಧಿ ಮಾರನ್ಗೆ ಸ್ಪೈಸ್ಜೆಟ್ನ ಹಾಲಿ ಸಿಎಂಡಿ ಅಜಯ್ ಸಿಂಗ್ 578 ಕೋಟಿ ರು. ಹಣ ನೀಡಬೇಕಿತ್ತು. ಆದರೆ ಈ ಪೈಕಿ ಇನ್ನೂ 396 ಕೋಟಿ ರು. ಡಾಲರ್ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾರನ್ ಕೋರ್ಚ್ ಮೊರೆ ಹೋಗಿದ್ದಾರೆ.
ಇದರ ವಿಚಾರಣೆ ಗುರುವಾರ ನಡೆದಾಗ, ‘ನಾವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೇವೆ’ ಎಂದು ಸ್ಪೈಸ್ಜೆಟ್ ಹೇಳಿತು ಹಾಗೂ ಸದ್ಯಕ್ಕೆ 75 ಕೋಟಿ ರು. ಮಾತ್ರ ನೀಡಲು ಶಕ್ತ ಇರುವುದಾಗಿ ಹೇಳಿತು. ಆದರೆ ಇದಕ್ಕೊಪ್ಪದ ನ್ಯಾಯಾಧೀಶರು ಸೆ.10ರ ಒಳಗೆ 100 ಕೋಟಿ ರು ನೀಡದಿದ್ದರೆ ವಿಮಾನಗಳನ್ನು ಜಪ್ತಿ ಮಾಡಿಕೊಂಡು ಹಣ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಆಗ ನಿಗದಿತ ದಿನದಲ್ಲಿ ಹಣ ನೀಡಲು ಒಪ್ಪಿಕೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ