
ಅಯೋಧ್ಯೆ[ನ.25]: ನಗರದ ವಿವಿಧೆಡೆ ಇರುವ ಗೋಶಾಲೆಗಳ ಗೋವುಗಳನ್ನು ಮೈ ಕೊರೆಯುವ ಚಳಿಯಿಂದ ರಕ್ಷಿಸಲು ಅಯೋಧ್ಯೆ ಮಹಾನಗರ ಪಾಲಿಕೆ ಸೆಣಬಿನ ಕೋಟ್ಗಳ ಮೊರೆ ಹೋಗಲು ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಯೋಧ್ಯೆ ನಗರ ನಿಗಮದ ಆಯುಕ್ತ ನೀರಜ್ ಶುಕ್ಲಾ, ಗೋಶಾಲೆಯಲ್ಲಿನ ಹಸುಗಳ ರಕ್ಷಣೆಗಾಗಿ 3-4 ಹಂತದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತದೆ. 700 ಎತ್ತುಗಳು ಸೇರಿದಂತೆ ಒಟ್ಟಾರೆ 1200 ಹಸುಗಳಿಗೆ ರಕ್ಷಣೆ ನೀಡುತ್ತಿರುವ ಬೈಶಿಂಗಪುರದಲ್ಲಿರುವ ಗೋಶಾಲೆಗೆ ಈ ಯೋಜನೆಯಡಿ ಸೆಣಬಿನ ಕೋಟ್ ಪೂರೈಸಲಾಗುತ್ತದೆ ಎಂದರು.
ಕರ್ನಾಟಕದ ಆಶ್ರಮವೊಂದರಲ್ಲಿವೆ ಅಯೋಧ್ಯೆ ರಾಮ-ಲಕ್ಷ್ಮಣ, ಸೀತಾ ಅಸಲಿ ವಿಗ್ರಹ!
ಅಲ್ಲದೆ, ಒಂದು ಕೋಟ್ಗೆ 250-300 ರು. ದರ ನಿಗದಿಯಾಗಿದ್ದು, ಹಸುಗಳು, ಕರು ಮತ್ತು ಎತ್ತುಗಳಿಗೆ ಪ್ರತ್ಯೇಕವಾದ ಕೋಟ್ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
ಅಯೋಧ್ಯೆ: ಮುಸ್ಲಿಂ ಯುವಕನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹನುಮನ ಚಿತ್ರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ