
ಮುಂಬೈ(ಅ.18): ನಷ್ಟದ ಕಾರಣ ಈಗಾಗಲೇ ಮುಚ್ಚಲ್ಪಟ್ಟಿರುವ ಖಾಸಗಿ ವಲಯದ ಜೆಟ್ ಏರ್ವೇಸ್ ವಿಮಾನಯಾನ ಕಂಪನಿಗೆ ಮರುಜೀವ ನೀಡುವ ಮಹತ್ವದ ಸಾಲ ತೀರುವಳಿ ಕ್ರಮಗಳ ಯೋಜನೆಗೆ ‘ಜೆಟ್ ಏರ್ವೇಸ್ ಸಾಲಗಾರರ ಸಮಿತಿ‘ (ಸಿಇಸಿ), ಶನಿವಾರ ಅಂಗೀಕಾರ ನೀಡಿದೆ. ಒಂದು ವೇಳೆ ಈ ಪ್ರಸ್ತಾಪ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಜೆಟ್ ಏರ್ವೇಸ್ ಮತ್ತೆ ತನ್ನ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಜೆಟ್ ಏರ್ವೇಸ್ ಸುಮಾರು 8 ಸಾವಿರ ಕೋಟಿ ರು. ಸಾಲವನ್ನು ಬ್ಯಾಂಕ್ಗಳಿಗೆ ಕಟ್ಟಬೇಕಿದೆ. ಈ ಹಿನ್ನೆಲೆಯಲ್ಲಿ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಸಾಲವನ್ನು ಹೇಗೆ ವಸೂಲಿ ಮಾಡಬೇಕು ಎಂಬ ಕ್ರಮಗಳ ಯೋಜನೆ ನೀಡಬಲ್ಲ ಕಂಪನಿಗಳಿಗೆ ಸಾಲಗಾರ ಬ್ಯಾಂಕ್ಗಳು ಎದುರು ನೋಡುತ್ತಿವೆ. ಇದರ ಅಂಗವಾಗಿ ಬ್ರಿಟನ್ನ ಕ್ಯಾಲ್ರಾಕ್ ಕ್ಯಾಪಿಟಲ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮೂಲದ ಉದ್ಯಮಿ ಮುರಾರಿಲಾಲ್ ಜಲನ್ ಅವರು ರೆಸಲ್ಯೂಶನ್ ಪ್ಲಾನ್ ಸಲ್ಲಿಸಿದ್ದವು.
ಪ್ರಸ್ತಾವದಲ್ಲಿ, ಹೊಸದಾಗಿ 1000 ಕೋಟಿ ರು. ಬಂಡವಾಳ ಹೂಡಿಕೆ, 6 ಹಳೆಯ ವಿಮಾನ ಮಾರಾಟ, ಸಾಲ ನೀಡಿದ ಕಂಪನಿಗಳಿಗೂ ಹೊಸ ಕಂಪನಿಯಲ್ಲಿ ಷೇರು ನೀಡುವ ಅಂಶಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ