ಬಂಗಾಳ ರಾಜ್ಯ​ಪಾ​ಲರ ಮೇಲೆ ದೀದಿ ಭ್ರಷ್ಟಾಚಾ​ರ ಆರೋ​ಪ!

Published : Jun 29, 2021, 01:13 PM IST
ಬಂಗಾಳ ರಾಜ್ಯ​ಪಾ​ಲರ ಮೇಲೆ ದೀದಿ ಭ್ರಷ್ಟಾಚಾ​ರ ಆರೋ​ಪ!

ಸಾರಾಂಶ

* ಪಶ್ಚಿಮ ಬಂಗಾಳ ರಾಜ್ಯಪಾ​ಲ ಜಗ​ದೀಪ್‌ ಧನಕರ್‌ ವಿರುದ್ಧ ದೀದೀ ಆರೋಪ * ​ಬಂಗಾಳ ರಾಜ್ಯ​ಪಾ​ಲರ ಮೇಲೆ ದೀದಿ ಭ್ರಷ್ಟಾಚಾ​ರ ಆರೋ​ಪ * ಆರೋ​ಪ​ವನ್ನು ತಳ್ಳಿ​ಹಾ​ಕಿ​ರುವ ಧನ​ಖರ್‌

ಕೋಲ್ಕ​ತಾ(ಜೂ.29): ಪಶ್ಚಿಮ ಬಂಗಾಳ ರಾಜ್ಯಪಾ​ಲ ಜಗ​ದೀಪ್‌ ಧನಕರ್‌ ಮತ್ತು ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರ ನಡು​ವಿನ ವಾಕ್ಸ​ಮರ ಮತ್ತು ತಿಕ್ಕಾಟ ಮುಂದು​ವ​ರೆದಿದೆ.

‘1996ರ ಹವಾಲಾ ಜೈನ್‌ ಪ್ರಕ​ರ​ಣ​ದ ಜಾಜ್‌ರ್‍ಶೀಟ್‌​ನಲ್ಲಿ ಗವ​ರ್ನರ್‌ ಹೆಸರು ಉಲ್ಲೇ​ಖ​ವಾ​ಗಿದೆ. ಭ್ರಷ್ಟಾ​ಚಾರ ಆರೋಪ ಎದು​ರಿ​ಸು​ತ್ತಿ​ರುವ ಧನ​ಖರ್‌ ಅವ​ರನ್ನು ರಾಜ್ಯಪಾಲ ಸ್ಥಾನ​ದಿಂದ ಹಿಂದಕ್ಕೆ ಕರೆ​ಸಿ​ಕೊ​ಳ್ಳಬೇಕು’ ಎಂದು ಕೇಂದ್ರ ಸರ್ಕಾ​ರಕ್ಕೆ ದೀದಿ ಒತ್ತಾ​ಯಿ​ಸಿ​ದ್ದಾರೆ.

ಇಂತಹ ಆರೋಪಗಳಿರುವ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ಏಕೆ ಅವಕಾಶ ನೀಡುತ್ತದೆ? ಕೇಂದ್ರ ಸರ್ಕಾರವು ಆರೋ‍‍ಪಪಟ್ಟಿ ತೆಗೆದು ಅವರ ಹೆಸರು ಇದೆಯೇ ಎಂದು ನೋಡಲಿ ಎಂದು ಹೇಳಿದ್ದಾರೆ.

ಧನಕರ್ ಅವರನ್ನು ಬಂಗಾಳ ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಕೇಂದ್ರಕ್ಕೆ ಬರೆದ ಮೂರು ಪತ್ರಗಳನ್ನು ಉಲ್ಲೇಖಿಸಿದ ಮಮತಾ, ಕೇಂದ್ರವು ಈಗಲಾದರೂ ತಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಹೇಳಿದರು.

ಈ ಆರೋ​ಪ​ವನ್ನು ತಳ್ಳಿ​ಹಾ​ಕಿ​ರುವ ಧನ​ಖರ್‌, ‘ಜೈನ್‌ ಹವಾಲ ಕೇಸ್‌​ನಲ್ಲಿ ನಮ್ಮ ಹೆಸ​ರಿಲ್ಲ. ಬ್ಯಾನರ್ಜಿ ಅವರು ಸುಳ್ಳು ಮತ್ತು ತಪ್ಪು ಮಾಹಿ​ತಿ​ಯನ್ನು ಹರ​ಡು​ತ್ತಿ​ದ್ದಾರೆ’ ಎಂದು ತಿರು​ಗೇಟು ನೀಡಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು