ತಮಿಳುನಾಡು ಚುನಾವಣಾ ಫಲಿತಾಂಶದ ಬಳಿಕ ಪ್ರತಿ ದಿನ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಡಿಎಂಕೆ ಹಾಗೂ ಎಐಡಿಎಂಕೆ ರಾಜ್ಯಪಾಲರನ್ನು ಕೇಳಿಕೊಂಡರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ವಿಜಯ್ ಜೊಸೆಫ್ ನೇತೃತ್ವದ ಟಿವಿಕೆ ಪಕ್ಷ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಹೀಗಾಗಿ ಇತ್ತ ಎಂಕೆ ಸ್ಟಾಲಿನ್ ಇಂದು ಮಹತ್ವದ ಸಭೆ ಕರೆದಿದ್ದಾರೆ.

09:44 AM (IST) May 08
08:34 AM (IST) May 08
ಕೇರಳದಲ್ಲಿ ಯುಡಿಎಫ್ ಬಹುಮತ ಗಳಿಸಿದರೂ, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿದೆ. ಹಾಲಿ ಸಂಸದ ಕೆ.ಸಿ.ವೇಣುಗೋಪಾಲ್ ಪರ ಬಹುತೇಕ ಶಾಸಕರು ಒಲವು ತೋರಿದ್ದು, ಇದು ಹಿರಿಯ ನಾಯಕರಾದ ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
07:36 AM (IST) May 08
07:29 AM (IST) May 08
ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದಿರುವ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸವು 10 ಶಾಸಕರ ಬೆಂಬಲ ಬೇಕಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದರೂ ವಿಜಯ್ ಪಕ್ಷದ ನಂಬರ್ 112 ಮಾತ್ರ. ಹೀಗಾಗಿ ಕಸರತ್ತು ಆರಂಭಗೊಂಡಿದೆ.