Published : Jun 29, 2025, 06:55 AM ISTUpdated : Jun 29, 2025, 03:31 PM IST

India Latest News Live: ಉತ್ತರಾಖಂಡದಲ್ಲಿ ವಿಪರೀತ ಮಳೆ ಭೂಕುಸಿತದ ಭೀತಿ, ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ!

ಸಾರಾಂಶ

ಡಿಶಾದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ವೇಳೆ ಶುಕ್ರವಾರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 750ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿದೆ. ರಥಯಾತ್ರೆ ಮಧ್ಯದಲ್ಲೇ ನಿಂತಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ರಥಯಾತ್ರೆ ವೇಳೆ ವೈದ್ಯಕೀಯ ನೆರವು ಕಲ್ಪಿಸಲು ಹೊರಜಿಲ್ಲೆಗಳಿಂದ ಹೆಚ್ಚುವರಿ 378 ವೈದ್ಯರ ನಿಯೋಜಿಸಲಾಗಿದೆ.

Kedarnath travel safety tips

03:31 PM (IST) Jun 29

ಉತ್ತರಾಖಂಡದಲ್ಲಿ ವಿಪರೀತ ಮಳೆ ಭೂಕುಸಿತದ ಭೀತಿ, ಚಾರ್‌ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ!

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಚಾರ್‌ಧಾಮ್ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತದಿಂದ ಹಲವು ಮಾರ್ಗಗಳು ಬಂದ್ ಆಗಿವೆ.
Read Full Story

11:21 AM (IST) Jun 29

ಪ್ರಸಿದ್ಧ ಚೆಫ್ ವಿಕಾಸ್ ಖನ್ನಾರ ನ್ಯೂಯಾರ್ಕ್ ರೆಸ್ಟೋರೆಂಟ್‌ಗೆ ನೀತಾ ಅಂಬಾನಿ ಭೇಟಿ, ಮೊಮ್ಮಗಳೊಂದಿಗೆ ನೃತ್ಯ!

NMACC ಇಂಡಿಯಾ ವೀಕೆಂಡ್‌ಗಾಗಿ ನೀತಾ ಅಂಬಾನಿ ಶೆಫ್ ವಿಕಾಸ್ ಖನ್ನಾ ಅವರೊಂದಿಗೆ ವಿಶೇಷ ಭಾರತೀಯ ಖಾದ್ಯಗಳನ್ನು ಸವಿದರು. ಬಂಗಲೋ ರೆಸ್ಟೋರೆಂಟ್‌ನಲ್ಲಿ ನೀತಾ ಅವರು ಕಲಾವಿದರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಈ ಕಾರ್ಯಕ್ರಮವು ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 12 ರಿಂದ 14 ರವರೆಗೆ ನಡೆಯಲಿದೆ.
Read Full Story

11:02 AM (IST) Jun 29

ಜಾತಿವಾದಿಗಳ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ್ ಗುಡುಗು

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾತಿವಾದದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. “ಒಗ್ಗಟ್ಟಿನಿಂದ ಇದ್ದರೆ ಒಳ್ಳೆಯದಾಗುತ್ತದೆ, ಒಡೆದರೆ ದುರ್ಗತಿ” ಎಂದು ಹೇಳಿದ್ದಾರೆ. ಭಾಮಾಶಾ ಜಯಂತಿಯಂದು ವ್ಯಾಪಾರಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿದರು.
Read Full Story

10:47 AM (IST) Jun 29

ಆತ್ಮಾಹುತಿ ದಾಳಿಯಲ್ಲಿ 16 ಪಾಕಿಸ್ತಾನಿ ಸೈನಿಕರು ಸಾವು; ಭಾರತ ದೂಷಿಸಿದ ಪಾಕ್‌ಗೆ ತಿರುಗೇಟು

ಶನಿವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 16 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Read Full Story

More Trending News